Advertisement

ಕುಡುಪು: ಪಂಚಮಿ ಉತ್ಸವ ಸಂಪನ್ನ 

10:12 AM Nov 24, 2017 | |

ಕುಡುಪು: ಪ್ರಸಿದ್ಧ ನಾಗಾರಾಧನ ಕ್ಷೇತ್ರ ಶ್ರೀ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಪಂಚಮಿ ಉತ್ಸವ ಸಂಪನ್ನಗೊಂಡಿತು. ಮುಂಜಾನೆ 4 ಗಂಟೆಗೆ ಶ್ರೀ ಅನಂತ ಪದ್ಮನಾಭ ದೇವರಿಗೆ ಉಷಃ ಕಾಲದ ಅಭಿಷೇಕದೊಂದಿಗೆ ಪೂಜೆ, ಬಳಿಕ ಸುಮಾರು 200ಕ್ಕಿಂತ ಮಿಕ್ಕಿ ಭಕ್ತರು ಒಳಾಂಗಣದಲ್ಲಿ ಮಡೆಸ್ನಾನ ಸೇವೆಗೈದರು. ನಾಗಬನದ ನಾಗಬಿಂಬಗಳಿಗೆ ವಿಶೇಷ ತಂಬಿಲ ಸೇವೆ ಜರಗಿತು.

Advertisement

ಶ್ರೀ ಅನಂತ ಪದ್ಮನಾಭ ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಸಹಸ್ರಾನಾಮ ಅರ್ಚನೆ, ಅಮೃತಪಡಿ ನಂದಾದೀಪ, ಹಾಲು ಪಾಯಸ ವಿಶೇಷ ಸೇವೆಗಳು ನಡೆದು, ಮಧ್ಯಾಹ್ನ ಪಂಚಮಿ ವಿಶೇಷ ಮಹಾಪೂಜೆ ಜರಗಿತು. ಸುಮಾರು 15 ಸಹಸ್ರದಷ್ಟು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಪಂಚಮಿಯ ತೈಲಾಭ್ಯಂಜನ ನಡೆದು ರಾತ್ರಿ ಶ್ರೀ ದೇವರ ಬಲಿ ಹೊರಟು ಕಟ್ಟೆ ಪೂಜೆ, ದೇಗುಲದ ಭದ್ರಾಸರಸ್ವತಿ ತೀರ್ಥ ಸರೋವರದಲ್ಲಿ ಶ್ರೀ ದೇವರ ತೆಪ್ಪೋತ್ಸವ, ಎರಡನೇ ಬಲಿ, ಚಂದ್ರಮಂಡಲೋತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ ಜರಗಿತು.

ಇಂದು ಷಷ್ಠಿ ಬ್ರಹ್ಮ ರಥೋತ್ಸವ
ಇಂದು ಶ್ರೀ ಅನಂತ ಪದ್ಮನಾಭ ದೇವರಿಗೆ ವಿಶೇಷವಾದ ಅಭಿಷೇಕಾದಿ ಸೇವೆಗಳು ಜರಗಿ, ಅಮೃತ ಪಡಿ ನಂದಾದೀಪ ವಿಶೇಷ ಸೇವೆ, ಷಷ್ಠಿಯ ಮಹಾಪೂಜೆಯ ಬಳಿಕ ಮಧ್ಯಾಹ್ನ 1ಕ್ಕೆ ಶ್ರೀ ದೇವರ ಬಲಿ ಹೊರಟು ಬ್ರಹ್ಮರಥಾರೋಹಣ ಹಾಗೂ ರಾಜ ಬೀದಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಮಹಾ ಅನ್ನ ಸಂತರ್ಪಣೆ ಜರಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next