Advertisement

ಕೊಡಿಯಾಲಬೈಲ್‌: ಕೆಡವಿದ ಕಟ್ಟಡದ ಸುತ್ತ ತಡೆಬೇಲಿ

12:00 AM Mar 06, 2021 | Team Udayavani |

ಕೊಡಿಯಾಲಬೈಲ್: ಶಿಥಿಲಾವಸ್ಥೆ ಕಾರಣದಿಂದಾಗಿ ಮುಚ್ಚಿದ್ದ ಕೊಡಿಯಾಲಬೈಲ್‌ನ ಕುದ್ಮುಲ್‌ ರಂಗರಾವ್‌ ಹೆಣ್ಣು ಮಕ್ಕಳ ವಸತಿ ನಿಲಯದ ಕಟ್ಟಡವನ್ನು ಕೆಲ ತಿಂಗಳ ಹಿಂದೆ ಕೆಡವಲಾಗಿದ್ದು, ಆ ಪ್ರದೇಶದ ಸುತ್ತ ತಡೆಬೇಲಿ ಅಳವಡಿಸಲಾಗುತ್ತಿದೆ.

Advertisement

ನೂತನ ಕಟ್ಟಡ ಕಾಮಗಾರಿ ಉದ್ದೇಶದಿಂದ ಹಳೆ ಕಟ್ಟಡ ಕೆಡಹುವ ಕಾಮಗಾರಿ ಕೆಲ ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತು. ಆದರೆ, ನೂತನ ಕಟ್ಟಡದ ಕಾಮಗಾರಿ ಆರಂಭವಾಗಿರಲಿಲ್ಲ. ಬದಲಾಗಿ ಈಗಿದ್ದ ಜಾಗಕ್ಕೆ ಮುಂಜಾಗ್ರತ ದೃಷ್ಟಿಯಿಂದ ಯಾವುದೇ ಬೇಲಿಯ ವ್ಯವಸ್ಥೆ ಮಾಡಲಾಗಿಲ್ಲ. ಈ ಪ್ರದೇಶದ ಮೈದಾನದ ರೀತಿ ಇತ್ತು. ಇದೇ ಕಾರಣಕ್ಕೆ ಸಾರ್ವಜನಿಕರು ಬೈಕ್‌, ಕಾರುಗಳನ್ನು ಇದೇ ಜಾಗದಲ್ಲಿ ನಿಲ್ಲಿಸುತ್ತಿದ್ದರು. ಕೆಲವೊಂದು ಬಾರಿ ಟೂರಿಸ್ಟ್‌ ಬಸ್‌ಗಳನ್ನು ಕೂಡ ಇದೇ ಸ್ಥಳದಲ್ಲಿ ಪಾರ್ಕಿಂಗ್‌ ಮಾಡಲಾಗುತ್ತಿತ್ತು. ಇದೀಗ ವಸತಿ ನಿಲಯದ ಸುತ್ತ ತಡೆಬೇಲಿ ಅಳವಡಿಸಲಾಗುತ್ತಿದೆ.

ಕೊಡಿಯಾಲಬೈಲ್‌ನ ಕುದು ಲ್‌ ರಂಗರಾವ್‌ ಹೆಣ್ಣು ಮಕ್ಕಳ ವಸತಿ ನಿಲಯದ ಕಟ್ಟಡವನ್ನು ಶಿಥಿಲಾವಸ್ಥೆಯ ಕಾರಣದಿಂದಾಗಿ ಕೆಡಹಲಾಗಿದ್ದು, ಇದೇ ಜಾಗದಲ್ಲಿ ಸುಮಾರು 8 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ವಸತಿ ನಿಲಯ ನಿರ್ಮಾಣವಾಗಲಿದೆ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಇನ್ನೇನು ಕೆಲ ದಿನಗಳಲ್ಲಿ ಸಚಿವರು ಶಿಲಾನ್ಯಾಸ ಕಾರ್ಯಕ್ರಮ ನೆರವೇ ರಿಸಲಿದ್ದಾರೆ. ಅವರ ದಿನಾಂಕ ನಿಗದಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next