Advertisement

ರಕ್ತದಾನದ ಅರಿವು ಮೂಡಿಸಿ: ಡಾ |ಜಿ. ಶಂಕರ್‌

06:35 AM Dec 29, 2017 | Team Udayavani |

ಪಡುಬಿದ್ರಿ: ಗ್ರಾಮೀಣ ಭಾಗದ ಯುವ ಜನರನ್ನೂ ಒಗ್ಗೂಡಿಸಿ ರಕ್ತದಾನಕ್ಕೆ ಪ್ರೇರೇಪಿಸಲು ಮೊಗವೀರ ಯುವ ಸಂಘಟನೆ ಪರಿಣಾಮಕಾರೀ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಮುಖ್ಯ ಪ್ರವರ್ತಕ ನಾಡೋಜ ಡಾ | ಜಿ. ಶಂಕರ್‌ ಹೇಳಿದರು.

Advertisement

ಪಡುಬಿದ್ರಿ ಬೀಚ್‌ನಲ್ಲಿ ಬುಧವಾರ   ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ, ಉಡುಪಿ ಅಂಬಲಪಾಡಿ ಜಿ. ಶಂಕರ್‌ ಫ್ಯಾಮಿಲ್‌ ಟ್ರಸ್ಟ್‌, ಮಂಗಳೂರು ರೋಟರಿ ಕ್ಲಬ್‌, ಪಡುಬಿದ್ರಿ ಕರಾವಳಿ ಫ್ರೆಂಡ್ಸ್‌ ಹಾಗೂ ಮೊಗವೀರ ಯುವ ಸಂಘಟನೆಯ ಎಲ್ಲಾ ಘಟಕಗಳ ವತಿಯಿಂದ ಜಿಲ್ಲೆಯಾದ್ಯಂತ ರಕ್ತದಾನ ಜಾಗೃತಿ ಮೂಡಿಸುವ  “ರಕ್ತದಾನ ರಥ ಸಂಚಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಂಗಳೂರು ರೋಟರಿ ಸಂಸ್ಥೆ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ರಕ್ತದಾನ ಶಿಬಿರಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಬಸ್ಸಿನಲ್ಲಿ ಒಮ್ಮೆ ನಾಲ್ಕು ಮಂದಿ ರಕ್ತದಾನ ಮಾಡಲು ಅವಕಾಶವಿದೆ. ಮಂಗಳೂರು ರೋಟರಿ ಕ್ಲಬ್‌ ಪೂರ್ವಾಧ್ಯಕ್ಷ ಯತೀಶ್‌ ಬೈಕಂಪಾಡಿ ಮತ್ತು ಮೊಗವೀರ ಯುವ ಸಂಘಟನೆಯ ಪೂರ್ವಾಧ್ಯಕ್ಷ ಎಂ. ಎಸ್‌. ಸಂಜೀವ ರಕ್ತದಾನ ಮಾಡುವ ಮೂಲಕ ರಕ್ತದಾನಕ್ಕೆ ಚಾಲನೆ ನೀಡಿದರು.

ಪಡುಬಿದ್ರಿ ಕರಾವಳಿ ಫ್ರೆಂಡ್ಸ್‌ನ ಸುಮಾರು 30 ಸದಸ್ಯರೂ ಇದೇ ವೇಳೆ ರಕ್ತದಾನ ಮಾಡಿದರು. ಈ ಸಂದರ್ಭ ಪಡುಬಿದ್ರಿ ಜಿ. ಪಂ. ಸದಸ್ಯ ಹಾಗೂ ಕರಾವಳಿ ಫ್ರೆಂಡ್ಸ್‌ ಅಧ್ಯಕ್ಷ ಶಶಿಕಾಂತ್‌ ಪಡುಬಿದ್ರಿ, ಬಜರಂಗದಳ ಕಾಪು ಪ್ರಕೋಷ್ಠದ ಸಂಚಾಲಕ ರಾಜೇಶ್‌ ಕೋಟ್ಯಾನ್‌ ಪಡುಬಿದ್ರಿ, ರೆಡ್‌ಕ್ರಾಸ್‌ ಸಂಸ್ಥೆಯ ಎಡ್ವರ್ಡ್‌ ವಾಝ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಗಣೇಶ್‌ ಕಾಂಚನ್‌, ವಿನಯ ಕರ್ಕೇರ, ಜೀವನ್‌ ಪಡುಬಿದ್ರಿ, ವಿನಾಯಕ ಪುತ್ರನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next