Advertisement

ಕೆಶಿಪ್‌ ಸ್ಥಳಾಂತರ: ಕೋನರೆಡ್ಡಿ ಸಮರ್ಥನೆ

07:00 AM Aug 12, 2018 | Team Udayavani |

ಬೆಳಗಾವಿ: ಬೆಳಗಾವಿಯಿಂದ ಕೆಶಿಪ್‌ ಕಚೇರಿಗಳನ್ನು ಹುದ್ದೆ ಸಮೇತ ಹಾಸನಕ್ಕೆ  ಸ್ಥಳಾಂತರ ಮಾಡಿರುವ  ಸಚಿವ ಎಚ್‌.ಡಿ. ರೇವಣ್ಣ ಅವರ ನಿರ್ಧಾರವನ್ನು  ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ಸಮರ್ಥಿಸಿಕೊಂಡರು.

Advertisement

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿದ್ದ  ಕೆಶಿಪ್‌ ವ್ಯಾಪ್ತಿಯಲ್ಲಿ ಬರುವ ಎಲ್ಲ ಯೋಜನೆಗಳು ಪೂರ್ಣಗೊಂಡಿವೆ. ಇದನ್ನು ಅಧಿಕಾರಿಗಳೇ ಹೇಳಿದ್ದಾರೆ. ಹೀಗಿರುವಾಗ ಈ ಕಚೇರಿ ಇಲ್ಲಿ ಇದ್ದು ಏನು ಪ್ರಯೋಜನ. ಹೊಸ ಕಾಮಗಾರಿ ನಡೆಯುವ ಸ್ಥಳಗಳಿಗೆ ಕಚೇರಿಗಳು  ಹೋಗಲೇಬೇಕು ಎಂದರು.

ನಾಳೆ ಹುಬ್ಬಳ್ಳಿ-ಧಾರವಾಡದಲ್ಲಿರುವ ಬಿಆರ್‌ಟಿಎಸ್‌ ಕಾಮಗಾರಿಗಳು ಪೂರ್ಣವಾದ ಮೇಲೆ ಅಲ್ಲಿರುವ ಕಚೇರಿ ಬೇರೆ ಕಡೆ ಕೆಲಸ ಆರಂಭವಾದರೆ ಅಲ್ಲಿಗೆ ಸ್ಥಳಾಂತರವಾಗಲೇ ಬೇಕು. ಅದೇ ರೀತಿ ಮೆಟ್ರೋ ಕೆಲಸ ಮುಗಿದ ಮೇಲೆ ಬೆಂಗಳೂರಿನಲ್ಲಿರುವ ಕಚೇರಿಗಳು ಬೇರೆ ಕಡೆ ಹೋಗಬೇಕು. ಅದೇ ರೀತಿ ಈಗ ಕೆಶಿಪ್‌ ಕಚೇರಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸಚಿವರ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.

ಉತ್ತರ ಕರ್ನಾಟಕದ ಬಗ್ಗೆ ಸಮ್ಮಿಶ್ರ ಸರಕಾರ ಮಲತಾಯಿ  ಧೊರಣೆ ತಾಳಿಲ್ಲ. ಇದು ಬಿಜೆಪಿಯವರ ಕೆಲಸ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next