Advertisement

ಸಾಯ್‌ ಕ್ರಮಗಳ ಬಗ್ಗೆ ಸಚಿವ ಕಿರಣ್ ರಿಜಿಜು ಪರಿಶೀಲನೆ

10:25 AM Apr 09, 2020 | keerthan |

ನವದೆಹಲಿ: ಕೋವಿಡ್-19ದಿಂದಾಗಿ ದೇಶದೆಲ್ಲೆಡೆ 21 ದಿನ ದಿಗ್ಬಂಧನ ಇರುವುದರಿಂದ ಅಥ್ಲೀಟ್‌ಗಳು ಈ ಅಮೂಲ್ಯ ಸಮಯವನ್ನು ಬಳಸಿಕೊಳ್ಳಲು ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿ ಕಾರ (ಸಾಯ್‌) ತೆಗೆದುಕೊಂಡಿರುವ ಕ್ರಮಗಳ ಪರಿಶೀಲನೆಯನ್ನು ಮಂಗಳವಾರ ಕೇಂದ್ರದ ಕ್ರೀಡಾ ಸಚಿವ ಕಿರಣ್‌ ರಿಜಿಜು ಮಾಡಿದರು.

Advertisement

ದೇಶಾದ್ಯಂತ ಇರುವ ಸಾಯ್‌ ಕೇಂದ್ರ ಗಳ ವಲಯ ನಿರ್ದೇಶಕರ ಜತೆ ವಿಡಿಯೊ ಕಾನ್ಫರೆನ್ಸ್‌ ನಡೆಸಿದ ರಿಜಿಜು, ಪರಿಸ್ಥಿತಿಯ ಅವಲೋಕನ ನಡೆಸಿದರು. ಲಾಕ್‌ ಡೌನ್‌ ಬಳಿಕ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು.

ಕಾನ್ಫರೆನ್ಸ್‌ ವೇಳೆ ಸಾಯ್‌ ಮತ್ತು ಕ್ರೀಡಾ ಸಚಿವಾಲಯದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಸಮಯದ ಉಪ ಯೋಗವನ್ನು ಯಾವ ರೀತಿ ಮಾಡುತ್ತಿದ್ದಾರೆ ಎಂದು ತಿಳಿಯಲು ಈ ಕಾನ್ಫರೆನ್ಸ್‌ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next