Advertisement

Kinnigoli: ದಾಂಧಲೆ ನಿರತ ಯುವಕನ ಸೆರೆ

09:12 PM Jul 16, 2024 | Team Udayavani |

ಕಿನ್ನಿಗೋಳಿ: ಮದ್ಯ ಸೇವಿಸಿ ಇಲ್ಲಿನ ಬಸ್‌ ನಿಲ್ದಾಣದಲ್ಲಿ ದಾಂಧಲೆ ನಡೆಸಿದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಂಗಳವಾರ ಅಪರಾಹ್ನ ಮದ್ಯಪಾನ ಮಾಡಿದ್ದ ಕೆಲ ಕೂಲಿ ಕಾರ್ಮಿಕರು ಜಗಳ ಆರಂಭಿಸಿದ್ದರು. ಬಳಿಕ ಅವರ ಪೈಕಿ ಯುವಕನೊಬ್ಬ ಕಟ್ಟಿಗೆಯನ್ನು ಹಿಡಿದುಕೊಂಡು ಬಂದು ದ್ವಿಚಕ್ರ ವಾಹನವನ್ನು ಪುಡಿಗೈದದ್ದಲ್ಲದೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದನು.

ವಿಷಯ ತಿಳಿದ ಪೊಲೀಸರು ಧಾವಿಸಿ ಬಂದು ಸಾರ್ವಜನಿಕ ಶಾಂತಿಭಂಗ  ಆರೋಪದಡಿ ಯುವಕನನ್ನು ಬಂಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next