Advertisement

King’s Cup: ಚೆಟ್ರಿಗೆ ವಿಶ್ರಾಂತಿ

10:54 PM Aug 29, 2023 | Team Udayavani |

ಹೊಸದಿಲ್ಲಿ: ಸ್ಟಾರ್‌ ಆಟ ಗಾರ ಹಾಗೂ ನಾಯಕ ಸುನೀಲ್‌ ಚೆಟ್ರಿ ವಿಶ್ರಾಂತಿ ಬಯಸಿದ್ದು, ಮುಂಬ ರುವ “ಕಿಂಗ್ಸ್‌ ಟ್ರೋಫಿ ಫ‌ುಟ್‌ಬಾಲ್‌’ ಪಂದ್ಯಾವಳಿಯಿಂದ ಹೊರಗುಳಿಯಲಿ ದ್ದಾರೆ. ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದೇ ಇದಕ್ಕೆ ಕಾರಣ.

Advertisement

ಸುನೀಲ್‌ ಚೆಟ್ರಿ ಏಷ್ಯನ್‌ ಗೇಮ್ಸ್‌ಗೆ ಲಭ್ಯರಿರುತ್ತಾರೆ ಎಂಬುದಾಗಿ ಕೋಚ್‌ ಐಗರ್‌ ಸ್ಟಿಮ್ಯಾಕ್‌ ತಿಳಿಸಿದರು.

4 ರಾಷ್ಟ್ರಗಳ ನಡುವಿನ ನಾಕೌಟ್‌ ಮಾದರಿಯ ಈ ಪಂದ್ಯಾವಳಿ ಸೆ. 7ರಿಂದ 10ರ ತನಕ ಥಾಯ್ಲೆಂಡ್‌ನ‌ ಚಿಯಾಂಗ್‌ ಮೈನಲ್ಲಿ ನಡೆಯಲಿದೆ. ಭಾರತ-ಇರಾಕ್‌ ಸೆ. 7ರ ಮೊದಲ ಸೆಮಿಫೈನಲ್‌ನಲ್ಲಿ ಸೆಣಸಲಿವೆ. ಇನ್ನೊಂದು ಸೆಮಿಫೈನಲ್‌ ಅದೇ ದಿನ ಥಾಯ್ಲೆಂಡ್‌ ಮತ್ತು ಲೆಬನಾನ್‌ ನಡುವೆ ನಡೆಯಲಿದೆ. ಸೆ. 10ರಂದು ಫೈನಲ್‌ ಹಣಾಹಣಿ. 2019ರ ಕಿಂಗ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತ ಕಂಚಿನ ಪದಕ ಜಯಿಸಿತ್ತು.

ಭಾರತ ತಂಡ
ಗೋಲ್‌ಕೀಪರ್: ಗುರುಪ್ರೀತ್‌ ಸಿಂಗ್‌ ಸಂಧು, ಅಮ್ರಿಂದರ್‌ ಸಿಂಗ್‌, ಗುರ್ಮೀತ್‌ ಸಿಂಗ್‌.
ಡಿಫೆಂಡರ್: ಆಶಿಷ್‌ ರೈ, ನಿಖೀಲ್‌ ಪೂಜಾರಿ, ಸಂದೇಶ್‌ ಜಿಂಗಾನ್‌, ಅನ್ವರ್‌ ಅಲಿ, ಮೆಹ್ತಾಬ್‌ ಸಿಂಗ್‌, ಲಾಲುcಂಗ್‌ನುಂಗ, ಆಕಾಶ್‌ ಮಿಶ್ರಾ, ಸುಭಾಶಿಷ್‌ ಬೋಸ್‌.
ಮಿಡ್‌ಫಿಲ್ಡರ್: ಜೀಕ್ಸನ್‌ ಸಿಂಗ್‌, ಸುರೇಶ್‌ ಸಿಂಗ್‌, ಬ್ರಂಡನ್‌ ಫೆರ್ನಾಂಡಿಸ್‌, ಸಾಹಲ್‌ ಅಬ್ದುಲ್‌ ಸಮದ್‌, ಅನಿರುದ್ಧ್ ಥಾಪ, ರೋಹಿತ್‌ ಕುಮಾರ್‌, ಆಶಿಖ್‌ ಕುರುನಿಯನ್‌, ಎನ್‌. ಮಹೇಶ್‌ ಸಿಂಗ್‌, ಚಂಗೆ.
ಫಾರ್ವರ್ಡ್ಸ್‌: ಮನ್ವೀರ್‌ ಸಿಂಗ್‌, ರಹೀಂ ಅಲಿ, ರಾಹುಲ್‌ ಕೆ.ಪಿ.

Advertisement

Udayavani is now on Telegram. Click here to join our channel and stay updated with the latest news.

Next