Advertisement
ಈ ಪ್ರವಾಸದ ವೇಳೆ ಆಸ್ಟ್ರೇಲಿಯವನ್ನೊಳಗೊಂಡ ಏಕದಿನ ತ್ರಿಕೋನ ಸರಣಿ ಹಾಗೂ ಚತುರ್ದಿನ ಪಂದ್ಯಗಳ ಸರಣಿ ನಡೆಯಲಿದೆ. ಇವೆರಡಕ್ಕೂ ಪ್ರತ್ಯೇಕ ತಂಡಗಳನ್ನು ಆರಿಸಲಾಗಿದ್ದು, ಎರಡಕ್ಕೂ ಕರ್ನಾಟಕದ ಕ್ರಿಕೆಟಿಗರೇ ನಾಯಕರಾಗಿರುವುದು ವಿಶೇಷ. ಇವರೆಂದರೆ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್. ಸ್ನಾಯು ಸೆಳೆತದಿಂದ ವಿಶ್ರಾಂತಿಯಲ್ಲಿದ್ದ ಪಾಂಡೆ ಈಗ ಚೇತರಿಸಿಕೊಂಡಿದ್ದಾರೆ.
ಕೇರಳದ ಎರ್ನಾಕುಳಂನವರಾದ ಬಾಸಿಲ್ ಥಂಪಿ ಮೊದಲ ಸಲ ಐಪಿಎಲ್ ಋತುವಿನಲ್ಲೇ 11 ವಿಕೆಟ್ ಹಾರಿಸಿ, ಗುಜರಾತ್ ಲಯನ್ಸ್ ಬೌಲಿಂಗ್ ಯಾದಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದರು. ಪರಿಣಾಮಕಾರಿ ಯಾರ್ಕರ್ಗಳ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳನ್ನು ತಬ್ಬಿಬ್ಬುಗೊಳಿಸಿದ್ದರು.
Related Articles
Advertisement
ಜು. 26ರಂದು ತ್ರಿಕೋನ ಸರಣಿ ಮೊದಲ್ಗೊಳ್ಳಲಿದೆ. ಆಗಸ್ಟ್ನಲ್ಲಿ 2 ಚತುರ್ದಿನ ಪಂದ್ಯಗಳು ನಡೆಯಲಿವೆ. ಸ್ಥಳ: ಬೆನೋನಿ ಮತ್ತು ಪೊಚೆಫ್ಸೂಮ್.
ಭಾರತ ತಂಡಗಳುತ್ರಿಕೋನ ಸರಣಿ: ಮನೀಷ್ ಪಾಂಡೆ (ನಾಯಕ), ಮನ್ದೀಪ್ ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಕರುಣ್ ನಾಯರ್, ಕೃಣಾಲ್ ಪಾಂಡ್ಯ, ರಿಷಬ್ ಪಂತ್ (ವಿ.ಕೀ.), ವಿಜಯ್ ಶಂಕರ್, ಅಕ್ಷರ್ ಪಟೇಲ್, ಯಜ್ವೇಂದ್ರ ಚಾಹಲ್, ಜಯಂತ್ ಯಾದವ್, ಬಾಸಿಲ್ ಥಂಪಿ, ಮೊಹಮ್ಮದ್ ಸಿರಾಜ್, ಶಾದೂìಲ್ ಠಾಕೂರ್, ಸಿದ್ಧಾರ್ಥ ಕೌಲ್. ಚತುರ್ದಿನ ಪಂದ್ಯ: ಕರುಣ್ ನಾಯರ್ (ನಾಯಕ), ಪ್ರಿಯಾಂಕ್ ಪಾಂಚಾಲ್, ಅಭಿನವ್ ಮುಕುಂದ್, ಶ್ರೇಯಸ್ ಅಯ್ಯರ್, ಅಂಕಿತ್ ಬವೆ°, ಸುದೀಪ್ ಚಟರ್ಜಿ, ಇಶಾನ್ ಕಿಶನ್ (ವಿ.ಕೀ.), ಹನುಮ ವಿಹಾರಿ, ಜಯಂತ್ ಯಾದವ್, ಶಾಬಾಜ್ ನದೀಂ, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಾದೂìಲ್ ಠಾಕೂರ್, ಅನಿಕೇತ್ ಚೌಧರಿ, ಅಂಕಿತ್ ರಜಪೂತ್.