Advertisement

ದಿಲ್ಲಿ : ವಿಚಾರಣಾಧೀನ ಕೈದಿಯ ಹತ್ಯೆ: 3 ಆರೋಪಿಗಳ ಸೆರೆ

12:11 PM Nov 17, 2017 | Team Udayavani |

ಹೊಸದಿಲ್ಲಿ : ಈ ವಾರದ ಆದಿಯಲ್ಲಿ ರೋಹಿಣಿ ಕೋರ್ಟ್‌ ಕಾಂಪ್ಲೆಕ್ಸ್‌ ನಲ್ಲಿ  ನಡೆದಿದ್ದ  ವಿಚಾರಣಾಧೀನ ಕೈದಿಯ ಹತ್ಯೆ ಸಂಬಂಧ ಪೊಲೀಸರು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಹತ್ಯೆಗೀಡಾಗಿದ್ದ  ವಿಚಾರಣಾಧೀನ ಕೈದಿ ವಿನೋದ್‌ ಅಲಿಯಾಸ್‌ ಬಲ್ಲೆ ಯನ್ನು 3ನೇ ಬೆಟಾಲಿಯನ್‌ ಸಿಬಂದಿಗಳು ನ.13ರಂದು ರೋಹಿಣಿ ಕೋರ್ಟಿನಲ್ಲಿ ಹಾಜರುಪಡಿಸಲು ತಂದಿದ್ದರು.  ಆತನನ್ನು ಮರಳಿ ಜೈಲಿಗೆ ಒಯ್ಯುವಾಗ ಹಂತಕರು ಆತನನ್ನು ಗುಂಡಿಕ್ಕಿ ಕೊಂದಿದ್ದರು. 

ಹಂತಕ ಅಬ್ದುಲ್‌ ಖಾನ್‌ನನ್ನು ಆಗ ಸ್ಥಳದಲ್ಲೇ ಸೆರೆ ಹಿಡಿಯಲಾಗಿ ಆತನ ಕೈಯಲ್ಲಿದ್ದ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದರು. 

ಪೊಲೀಸರು ಖಾನ್‌ನನ್ನು  ತೀವ್ರವಾಗಿ ಪ್ರಶ್ನಿಸಿದಾಗ ಆತನು ಕುಖ್ಯಾತ ನೀರಜ್‌ ಬವಾನಾ ಗ್ಯಾಂಗ್‌ ನ ಓರ್ವ ಸದಸ್ಯನೆಂದು ಗೊತ್ತಾಯಿತು. ಆತ ಕೊಟ್ಟ ಮಾಹಿತಿಯ ಮೇರೆಗೆ ಈ ಹತ್ಯೆಗೆ ಸಂಬಂಧಿಸಿ ಇನ್ನೂ ಮೂವರು ಆರೋಪಿಗಳನ್ನು ಸೆರೆ ಹಿಡಿಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next