Advertisement

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

12:51 AM Apr 20, 2024 | Team Udayavani |

ಹೊಸದಿಲ್ಲಿ: ಈವರೆಗೆ ಮನೆಯಿಂದ ಬಂದ ಊಟದಲ್ಲಿ ಕೇವಲ ಮೂರೇ ಮಾವು ತಿಂದಿದ್ದೇನೆ. ಒಮ್ಮೆ ಮಾತ್ರ ನವರಾತ್ರಿ ಪ್ರಸಾದವಾಗಿ ಆಲೂ ಪೂರಿ ಸ್ವೀಕರಿಸಿದ್ದೇನೆ ಎಂದು ದಿಲ್ಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ದಿಲ್ಲಿ ವಿಶೇಷ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

Advertisement

ಮಧುಮೇಹಿಯಾಗಿರುವ ಅರವಿಂದ್‌ ಕೇಜ್ರಿವಾಲ್‌ ಮಾವು, ಆಲೂ ಪೂರಿ ಮತ್ತು ಸ್ವೀಟ್ಸ್‌ ಹೆಚ್ಚಿಗೆ ತಿನ್ನುತ್ತಿದ್ದಾರೆಂದು ಜಾರಿ ನಿರ್ದೇಶನಾಲಯ ಗುರುವಾರ ಆರೋಪಿಸಿತ್ತು. ಜೈಲಿನಲ್ಲಿ ಇನ್ಸುಲಿನ್‌ ಪೂರೈಕೆ ಹಾಗೂ ನಿತ್ಯ ವೈದ್ಯರ ಸಂಪರ್ಕಕ್ಕೆ ಅವಕಾಶ ಕೋರಿ ರೋಸ್‌ ಅವೆನ್ಯೂ ಕೋರ್ಟ್‌ಗೆ ಕೇಜ್ರಿವಾಲ್‌ ಮನವಿ ಮಾಡಿದ್ದರು. ಈ ಸಂಬಂಧ ಹೊಸದಾಗಿ ಮತ್ತೆ ಅರ್ಜಿ ಸಲ್ಲಿಸಿರುವ ಕೇಜ್ರಿವಾಲ್‌, ವೈದ್ಯಕೀಯ ತಪಾಸಣೆ ವೇಳೆ ತಮ್ಮ ಹೆಂಡತಿ ಸುನೀತಾ ಹಾಜರಿಗೂ ಅವಕಾಶ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next