Advertisement

ಕಿಡ್ನಿ ವೈಫ‌ಲ್ಯ: ನೆರವು ಯಾಚನೆ

12:12 PM Sep 29, 2018 | |

ಬಂಟ್ವಾಳ: ಸಜಿಪ ಮೂಡ ಗ್ರಾಮದ ಬೊಳ್ಳಾಯಿ ಜಾಡಕೋಡಿ ನಿವಾಸಿಗಳಾದ ಪಿ.ಬಿ. ಮೊಹಮ್ಮದ್‌ ಹಾಗೂ ಮೈಮುನಾ ದಂಪತಿ ಪುತ್ರ ಹಂಝ (19) ಅವರ ಎರಡೂ ಕಿಡ್ನಿ ವೈಫ‌ಲ್ಯ ಹೊಂದಿದ್ದು, ಚಿಕಿತ್ಸೆಗಾಗಿ ಬಡಕುಟುಂಬ ದಾನಿಗಳ ನೆರವು ಯಾಚಿಸಿದೆ.

Advertisement

ಸಣ್ಣ ಮಗುವಾಗಿರುವಾಗಲೇ ಟ್ಯೂಬ್‌ ಮೂಲಕ ಮೂತ್ರ ಮಾಡುವಂತಹ ಸರ್ಜರಿಗೆ ಒಳಗಾದ ಹಂಝ ಅವರಿಗೆ 2014ರಲ್ಲಿ ಪ್ರಥಮ ಬಾರಿಗೆ ಕಿಡ್ನಿ ಸಮಸ್ಯೆ ಉಂಟಾಯಿತು. ತಂದೆ ಮೊಹಮ್ಮದ್‌ ಅವರು ಸಜಿಪಮೂಡ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರು ಪೂರೈಕೆ ಮಾಡುವ ಕೆಲಸದಲ್ಲಿದ್ದು, ಮಗನ ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಅಸಹಾಯಕರಾಗಿದ್ದಾರೆ. ಹಂಝ ಅವರಿಗೆ ದೇರಳಕಟ್ಟೆ ಕೆ.ಎಸ್‌. ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ದಾನಿಗಳು ಮೊಹಮ್ಮದ್‌ ಅವರ ಬ್ಯಾಂಕ್‌ ಖಾತೆಗೆ ಧನಸಹಾಯ ಸಂದಾಯ ಮಾಡುವಂತೆ ಕೋರಲಾಗಿದೆ.

ಪಿ.ಬಿ. ಮೊಹಮ್ಮದ್‌, ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಮೆಲ್ಕಾರ್‌ ಶಾಖೆ ಉಳಿತಾಯ ಖಾತೆ ಸಂಖ್ಯೆ: 67313870199, ಐಎಫ್ಎಸ್‌ ಕೋಡ್‌: SBIN0071134.

Advertisement

Udayavani is now on Telegram. Click here to join our channel and stay updated with the latest news.

Next