Advertisement

ಕಿದಂಬಿ ಶ್ರೀಕಾಂತ್‌ಗೆ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಕಿರೀಟ

12:20 PM Jun 25, 2017 | |

ಸಿಡ್ನಿ: ಭರ್ಜರಿ ಹೋರಾಟ ಪ್ರದರ್ಶಿಸಿದ ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಆಟಗಾರ ಕೆ.ಶ್ರೀಕಾಂತ್‌ ಆಸ್ಟ್ರೇಲಿಯಾ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

Advertisement

ಭಾನುವಾರ ನಡೆದ  ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಶ್ರೀಕಾಂತ್‌ 22-20, 21-16  ನೇರ ಸೆಟ್‌ನಲ್ಲಿಯೇ ಚೀನಾದ ಚೆನ್‌ ವಿರುದ್ಧ ಜಯ ಸಾಧಿಸಿ ಹೊಸ ಸಾಧನೆ ಮಾಡಿದರು. 

 ಏಪ್ರಿಲ್‌ನಲ್ಲಿ ನಡೆದ ಸಿಂಗಾಪುರ್‌ ಓಪನ್‌ನಲ್ಲಿ ಫೈನಲ್‌ ತಲುಪಿ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತರಾಗಿದ್ದರು. ಕಳೆದವಾರ ನಡೆದ ಇಂಡೋನೇಷ್ಯಾ ಓಪನ್‌ನಲ್ಲಿ ಫೈನಲ್‌ ತಲುಪಿ ಪ್ರಶಸ್ತಿ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತೀಯ ಪುರುಷರಲ್ಲಿ ಮೊದಲನೇ ವ್ಯಕ್ತಿ ಎಂಬ ಬಿರುದಿಗೆ ಶ್ರೀಕಾಂತ್‌ ಭಾಜನರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next