Advertisement

Karwar: ಮಣ್ಣಿನ ಮುದ್ದೆಯನ್ನು ಬಾವಿಗೆ ಹಾಕಲು ಹೋಗಿ ನೀರುಪಾಲಾದ ಮಗು

04:23 PM Aug 26, 2023 | Team Udayavani |

ಕಾರವಾರ: ಮಗುವೊಂದು ಮನೆಯ ಮುಂದೆ ಆಟವಾಡುತ್ತಾ ಬಾವಿಗೆ ಬಿದ್ದು ಮೃತಪಟ್ಟ ದುರ್ಘಟನೆ ಕಾರವಾರದ ಹರಿದೇವನಗರದಲ್ಲಿ ನಡೆದಿದೆ.

Advertisement

ಸೂರಜ್ ಬಂಟ್ ಮತ್ತು ವಿನುತಾ ಅವರ ಮೂರು ವರ್ಷದ ಮಗಳು ಸ್ತುತಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಮಣ್ಣಿನ ಮುದ್ದೆಯನ್ನು ಗಣಪ ಎಂದು ಬಾವಿಗೆ ಹಾಕಲು ಹೋಗಿ ಆಯ ತಪ್ಪಿ ಬಾವಿಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ನಗರಸಭೆಗೆ ಸೇರಿದ ಬಾವಿ ಕಟ್ಟೆ ಸುರಕ್ಷಿತ ಎತ್ತರದಲ್ಲಿರದ ಕಾರಣ ಮಗು ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಘಟನೆಯಿಂದ ದಂಪತಿಗಳು, ಹರಿದೇವನಗರದ ಜನ ತಲ್ಲಣಕ್ಕೆ ಒಳಗಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಕ್ಕಳಿಗೆ ಸುರಕ್ಷಿತವಲ್ಲದ ಬಾವಿ ಕಟ್ಟೆ ಎತ್ತರವನ್ನು ಹೆಚ್ಚಿಸಲು ಹರಿದೇವನಗರದ ಜನರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next