Advertisement

ನಿಖಿಲ್‌ ಚಿತ್ರ ಮೆಚ್ಚಿದ ಕಿಚ್ಚ

10:57 AM Jan 29, 2019 | |

ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಬೊಂಬಾಟ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಸ್ಯಾಂಡಲ್‍ವುಡ್‍ನ ಆರಡಿ ಕಟೌಟ್, ಬಾದ್‍ಷಾ, ಕಿಚ್ಚ ಸುದೀಪ್ “ಸೀತಾರಾಮ ಕಲ್ಯಾಣ’ವನ್ನು ಕಣ್ತುಂಬಿಕೊಂಡಿದ್ದು, ಚಿತ್ರಕ್ಕೆ ಫುಲ್ ಫಿದಾ ಆಗಿದ್ದಾರೆ. ಮುಖ್ಯವಾಗಿ ನಿಖಿಲ್ ಕುಮಾರ್ ನಟನೆಯನ್ನು ಮೆಚ್ಚಿದ್ದು, ಟ್ವೀಟರ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Advertisement

“ನಿಖಿಲ್ ನಿಜಕ್ಕೂ ಒಬ್ಬ ಭರವಸೆಯ ನಟ. ಚಿತ್ರದಲ್ಲಿ ತುಂಬಾ ಸೂಕ್ಷ್ಮವಾಗಿ ನಟಿಸಿದ್ದಾರೆ. ಅಂತೆಯೇ ದೃಶ್ಯಗಳಿಗೆ ತಕ್ಕಂತೆ ಅವರು ತಮ್ಮಿಂದ ಎಷ್ಟು ನ್ಯಾಯ ಕೊಡಬೇಕೋ ಅಷ್ಟು ಚೆನ್ನಾಗಿಯೇ ಅಭಿನಯಿಸಿದ್ದಾರೆ. ಅಲ್ಲದೇ ಜನರ ಹೃದಯಗಳಿಗೆ ಇನ್ನಷ್ಟು ಹತ್ತಿರವಾಗುವಂತ ಕಥೆಯುಳ್ಳ ಚಿತ್ರಗಳಲ್ಲಿ, ಅಂತಾ ಪಾತ್ರಗಳಲ್ಲಿ ನಿಖಿಲ್‌ನ ನೋಡೋಕೆ ಇಷ್ಟ ಪಡ್ತೀನಿ. ಶುಭಹಾರೈಕೆಗಳು ಗೆಳೆಯ’ ಎಂದು ಟ್ವೀಟರ್​​​​ನಲ್ಲಿ ಹಾರೈಸಿದ್ದಾರೆ.

ಇನ್ನು ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next