Advertisement

ಇಂದು ಸುದೀಪ್‌ ಹುಟ್ಟುಹಬ್ಬ: ಸಂಭ್ರಮದಲ್ಲಿ ಅಭಿಮಾನಿಗಳು

10:10 AM Sep 02, 2022 | Team Udayavani |

ಇಂದು ನಟ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಹಬ್ಬ. ಅದಕ್ಕೆ ಕಾರಣ ಸುದೀಪ್‌ ಅವರ ಹುಟ್ಟುಹಬ್ಬ. ಸುದೀಪ್‌ ಅವರ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ಸಂಭ್ರಮ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕೊರೊನಾ ಕಾರಣದಿಂದ ಅಭಿಮಾನಿಗಳು ಸುದೀಪ್‌ ಅವರ ಬರ್ತ್‌ಡೇಯನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಈಗಾಗಲೇ ಸುದೀಪ್‌ ಅವರ ಸಿಡಿಪಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

Advertisement

ಇನ್ನು, ಇತ್ತೀಚೆಗಷ್ಟೇ ಸುದೀಪ್‌ ನಟನೆಯ “ವಿಕ್ರಾಂತ್‌ ರೋಣ’ ಚಿತ್ರ ಬಿಡುಗಡೆಯಾಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಹಿಟ್‌ಲಿಸ್ಟ್‌ ಸೇರಿತ್ತು. ಈ ಸಿನಿಮಾ ಮೂಲಕ ಸುದೀಪ್‌ ಹೊಸ ಜಾನರ್‌ಗೆ ತೆರೆದುಕೊಂಡಿದ್ದರು.

ಸದ್ಯ “ವಿಕ್ರಾಂತ್‌ ರೋಣ’ ಹಿಟ್‌ ಮೂಡ್‌ನಲ್ಲಿರುವ ಸುದೀಪ್‌ ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ, ಚಿತ್ರತಂಡದ ಕಡೆಯಿಂದ ಯಾವುದೇ ಹೊಸ ಸಿನಿಮಾ ಘೋಷಣೆಯಾಗಿಲ್ಲ. ಈಗಾಗಲೇ ಮಾತುಕತೆಯಾಗಿದ್ದು, ಶೀಘ್ರದಲ್ಲೇ ಘೋಷಣೆಯಾಗಲಿದೆ.

ಇನ್ನು, ಭಾರತೀಯ ಅಂಚೆ ಇಲಾಖೆ ಸುದೀಪ್‌ ಅವರ ವಿಶೇಷ ಅಂಚೆ ಲಕೋಟೆ ಹೊರತರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next