Advertisement

ಆಪ್ತ ಮಿತ್ರನನ್ನು ನೆನೆದು ಕಣ್ಣೀರಿಟ್ಟ ಖರ್ಗೆ 

07:40 AM Jul 28, 2017 | Team Udayavani |

ಬೆಂಗಳೂರು: ಧರಂಸಿಂಗ್‌ ನಿಧನದಿಂದ ಭಾವುಕರಾಗಿದ್ದ ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಮ್ಮ ಆಪ್ತಮಿತ್ರನನ್ನು ನೆನೆದು ಕಣ್ಣೀರಿಟ್ಟರು. ದೆಹಲಿಯಲ್ಲಿ ಮಾತನಾಡಿ, “ನಮ್ಮದು 1972ರಿಂದ ಎಂದೂ ಭಂಗವಾಗದ ಸ್ನೇಹ. 

Advertisement

ನಿತ್ಯ ಇಬ್ಬರೂ ಮಾತನಾಡಿಕೊಳ್ಳುತ್ತಿದ್ದೆವು. ಜೊತೆಯಾಗಿಯೇ ನಿರ್ಧಾರ ತೆಗೆದುಕೊಳ್ಳುತ್ತಿದ್ದೆವು. ಈಗ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ’ ಎಂದು ಭಾವುಕರಾದರು.

“ಇತ್ತೀಚೆಗಷ್ಟೇ ನಮ್ಮ ಮನೆಗೆ ಬಂದು ಜನ್ಮದಿನದ ಶುಭಾಷಯ ಹೇಳಿದ್ದರು. ಅವರಿಗೆ ಹುಷಾರಿಲ್ಲದ ಕಾರಣ ನಾನೇ ನಿಮ್ಮ ಮನೆಗೆ ಬರುತ್ತೇನೆಂದು ಹೇಳಿದ್ದರೂ ಅವರೇ ಬಂದು ನನ್ನನ್ನು ಅಭಿನಂದಿಸಿ ಹೋಗಿದ್ದರು.

ಕೊನೆಯ ಬಾರಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡಿ ಹೋಗಿದ್ದರು. ಅದಾಗಿ ನಾಲ್ಕೈದು ದಿನಗಳಲ್ಲಿಯೇ ಅಗಲಿ ಹೋಗುತ್ತಾರೆಂಬ ನಿರೀಕ್ಷೆ ಇರಲಿಲ್ಲ’ ಎಂದು ಕಣ್ಣೀರಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next