Advertisement

ಸುಳ್ಳು, ವಿಶ್ವಾಸಘಾತುಕ, ದ್ವೇಷದ ವ್ಯವಸ್ಥೆ ಕೆಡವಲೇ ಬೇಕು :ಎಐಸಿಸಿ ಅಧ್ಯಕ್ಷ ಖರ್ಗೆ

06:23 PM Oct 26, 2022 | Team Udayavani |

ನವದೆಹಲಿ : 24 ವರ್ಷಗಳ ನಂತರ ಕಾಂಗ್ರೆಸ್‌ನ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬುಧವಾರ ಅಧಿಕಾರ ವಹಿಸಿಕೊಂಡರು, ಕಾರ್ಯಕರ್ತರಿಗೆ ಶಕ್ತಿ ತುಂಬಲು ರಾಹುಲ್ ಗಾಂಧಿಯವರ ‘ಡರೋ ಮತ್’ ಘೋಷಣೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ “ಸುಳ್ಳು, ವಿಶ್ವಾಸಘಾತುಕ ಮತ್ತು ದ್ವೇಷದ ವ್ಯವಸ್ಥೆಯನ್ನು ಕೆಡವುತ್ತದೆ” ಎಂದು ಘೋಷಿಸಿದರು.

Advertisement

ಸುಮಾರು ಎರಡು ದಶಕಗಳ ಕಾಲ ತಾನು ಮುನ್ನಡೆಸಿರುವ ಪಕ್ಷದ ಅಧಿಕಾರವನ್ನು ಹಸ್ತಾಂತರಿಸಿದ ಸೋನಿಯಾ ಗಾಂಧಿ “ಬದಲಾವಣೆ ವಿಶ್ವದ ನಿಯಮ” ಎಂದು ಹೇಳಿದರು. “ಇಂದು, ನಾನು ಈ ಜವಾಬ್ದಾರಿಯಿಂದ ಮುಕ್ತಳಾಗುತ್ತೇನೆ ಮತ್ತು ಈ ಭಾರವು ನನ್ನಿಂದ ಹೊರಗುಳಿಯುತ್ತದೆ. ಅದಕ್ಕಾಗಿಯೇ ನಾನು ನಿರಾಳವಾಗಿದ್ದೇನೆ” ಎಂದರು.

ಮುಂದಿರುವ ಸವಾಲುಗಳನ್ನು ಒಪ್ಪಿಕೊಂಡ ಖರ್ಗೆ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಹಾಗೂ ಇತರೆ ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿದ್ದು, ಕಾಂಗ್ರೆಸ್ ಸ್ಥಾಪಿಸಿದ ಪ್ರಜಾಪ್ರಭುತ್ವವನ್ನು ಬಿಜೆಪಿ ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಸರ್ವಸ್ವವನ್ನು ನೀಡಬೇಕಾಗಿದೆ ಎಂದರು.

“ನಾವು ಎರಡು ರಾಜ್ಯಗಳಲ್ಲಿ ದೃಢವಾಗಿ ಕಾರ್ಯನಿರ್ವಹಿಸಬೇಕಾಗಿದೆ ಮತ್ತು ಅವುಗಳಲ್ಲಿ ಒಟ್ಟಾಗಿ ಯಶಸ್ವಿಯಾಗಲು ನಮಗೆ ಪ್ರತಿಯೊಬ್ಬರ ಶಕ್ತಿಯ ಅಗತ್ಯವಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ” ಎಂದು ಒತ್ತಿ ಹೇಳಿದರು.

ಚುನಾವಣೆಯಲ್ಲಿ ಜಯಗಳಿಸಲು ಶಶಿ ತರೂರ್ ಅವರನ್ನು ಸೋಲಿಸಿದ 80 ವರ್ಷದ ಖರ್ಗೆ ಅವರು ಹಳೆಯ ಪಕ್ಷವು ಪ್ರಸ್ತುತತೆಯನ್ನು ಕಂಡುಕೊಳ್ಳಲು ಹೆಣಗಾಡುತ್ತಿರುವ ಸಮಯದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.

Advertisement

ಕಾಂಗ್ರೆಸ್ ಐತಿಹಾಸಿಕ ಚುನಾವಣಾ ಕೆಳಮಟ್ಟದಲ್ಲಿದ್ದು ಎರಡು ರಾಜ್ಯಗಳಲ್ಲಿಮಾತ್ರ ಅಧಿಕಾರದಲ್ಲಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ಪಕ್ಷವನ್ನು ಅಧಿಕಾರಕ್ಕೆ ಕೊಂಡೊಯ್ಯುಲು ಶ್ರಮ ಹಾಕಬೇಕಾಗಿರುವುದು ಅವರ ತಕ್ಷಣದ ಕೆಲಸವಾಗಿದೆ. ಅಧಿಕಾರದಲ್ಲಿರುವ ಬಿಜೆಪಿ ಮತ್ತು ಉತ್ಸುಕ ಎಎಪಿಯನ್ನು ಎದುರಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next