Advertisement

ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಖಂಡ್ರೆ ನೇಮಕ: ಸಂಭ್ರಮ

11:11 AM Jul 05, 2018 | Team Udayavani |

ಭಾಲ್ಕಿ: ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಈಶ್ವರ ಖಂಡ್ರೆ ನೇಮಕವಾದ ಹಿನ್ನೆಲೆಯಲ್ಲಿ ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

Advertisement

ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ದಿನೇಶ ಗುಂಡೂರಾವ ಮತ್ತು ಕಾರ್ಯಾಧ್ಯಕ್ಷರನ್ನಾಗಿ ಮಾಜಿ ಸಚಿವ ಹಾಗೂ ಶಾಸಕ ಈಶ್ವರ ಖಂಡ್ರೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಯುವ ಕಾಂಗ್ರೆಸ್‌ ಮುಖಂಡರು ಶಾಸಕರ ಗೃಹ ಕಚೇರಿಯಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು. ನಂತರ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಯಿಂದ ಗಾಂಧಿ ವೃತ್ತದ ವರೆಗೆ ಜಯ ಘೋಷ ಮಾಡುತ್ತ ಮೇರವಣಿಗೆ ನಡೆಸಿದರು. 

ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಮಹಾದೇವ ಸ್ವಾಮಿ, ಪುರಸಭೆ ಅಧ್ಯಕ್ಷ ವಿಶಾಲ ಪುರಿ, ಕಾಂಗ್ರೆಸ್‌ ಮುಖಂಡರಾದ ಪ್ರವೀಣ ಹಣಮಶೆಟ್ಟೆ, ಸಂಗಮೇಶ ವಾಲೆ, ಸಂಜು ಮುದ್ದಾ, ಕಪೀಲ ಕಲ್ಯಾಣೆ, ಸಂಜೀವ ಲೋಖಂಡೆ, ಜೈಪಾಲ ಬೋರಾಳೆ, ಸಂತೋಷ ಬಿಜಿಪಾಟೀಲ, ಪ್ರಶಾಂತ ಕೋಟಗೀರಾ, ಮಾರುತಿ ಭಂಗಾರೆ, ಗೌರಿಶಂಕರ ಸ್ವಾಮಿ, ರಾಜು ಪಾಟೀಲ ಖಾನಾಪುರ, ರವಿ ಬಿರಾದಾರ ಜ್ಯಾಂತಿ, ಬನ್ಸಿಲಾಲ್‌, ಕಿರಣ ಬಿರಾದಾರ, ಗಿರೀಶ ಬಿರಾದಾರ, ಪಂಚಶೀಲ ಪಾಟೀಲ, ಬಾಲಾಜಿ ಮರೂರಕರ, ಶಿವು ಮಡಿವಾಳ ಇದ್ದರು.

„ಭಾಲ್ಕಿ: ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ನೇಮಕವಾದ ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಿನ ಉಚ್ಚಾ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತರು ಬುಧವಾರ ಸಂಭ್ರಮ ಆಚರಿಸಿದರು. ಕಾಂಗ್ರೆಸ್‌ ಧ್ವಜ ಹಿಡಿದು ಪಟಾಕಿ ಸಿಡಿಸಿ ಸಿಹಿ ಹಂಚಿದರು.

ಕಾಂಗ್ರೆಸ್‌ ಯುವ ಮುಖಂಡ ಮಹೇಶ ಸಜ್ಜನಶೆಟ್ಟಿ, ಪ್ರಕಾಶ ಮಳಚಾಪುರೆ, ರಾಜಕುಮಾರ ಹುಣಜೆ, ಸಚಿನಸ್ವಾಮಿ ಚಿದ್ರೆ, ರತ್ನಾಕಾಂತ ಮಾಲಿಪಾಟೀಲ, ಸುಭಾಷ ನಿಜಲಿಂಗೆ, ಗಜಾನನ ಮಳಚಾಪುರೆ, ದಿಲೀಪ ಆಳ್ಳೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next