Advertisement

‘ಕೆಜಿಎಫ್ 2’ನನ್ನ ಸ್ವಂತ ಸಾಮರ್ಥ್ಯವನ್ನು ನೆನಪಿಸಿತು: ಸಂಜಯ್ ದತ್

03:00 PM Apr 23, 2022 | Team Udayavani |

ಮುಂಬಯಿ: ”ಕೆಜಿಎಫ್ ಚಾಪ್ಟರ್ 2′ ನನ್ನನ್ನು  ಕಂಫರ್ಟ್ ಝೋನ್‌ನಿಂದ ಹೊರಗೆ ತಂದಿದ್ದು, ಸಿನಿಮಾವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ’ ಎಂದು ಬಾಲಿವುಡ್ ಸ್ಟಾರ್ ಸಂಜಯ್ ದತ್ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಮನದಾಳದ ಅಭಿಪ್ರಾಯ ಹೊರ ಹಾಕಿದ್ದಾರೆ.

Advertisement

ಇತ್ತೀಚೆಗೆ ಬಿಡುಗಡೆಯಾದ “ಕೆಜಿಎಫ್ ಚಾಪ್ಟರ್ 2” ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ 62 ರ ಹರೆಯದ ಸಂಜಯ್ ದತ್, 2018 ರ ಬ್ಲಾಕ್‌ಬಸ್ಟರ್ “ಕೆಜಿಎಫ್ 1” ನ ಮುಂದುವರಿದ ಕಥೆಯಲ್ಲಿ ಅಧೀರ ಎಂಬ ಮುಖ್ಯ ಖಳ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.

ಪ್ರತಿ ಬಾರಿಯೂ ಆರಾಮ ವಲಯದಿಂದ ನನ್ನನ್ನು ಹೊರ ತರುವಂತಹ ಚಲನಚಿತ್ರವನ್ನು ನಾನು ಹುಡುಕುತ್ತೇನೆ. ‘ “ಕೆಜಿಎಫ್ ಚಾಪ್ಟರ್ 2″’ ನನ್ನ ಪಾಲಿಗೆ ಅಂತಹ ಚಿತ್ರ. ಇದು ನನ್ನ ಸ್ವಂತ ಸಾಮರ್ಥ್ಯವನ್ನು ನನಗೆ ನೆನಪಿಸಿತು ಮತ್ತು ವಿಶೇಷ ಅನಿಸಿತು.  ನಾನು ಅದರೊಂದಿಗೆ ಮೋಜು ಮಾಡಿದೆ”ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರತಿ ಬಾರಿ ಜೀವನವು ಆಶ್ಚರ್ಯಕರವಾದಾಗ, ಅದಕ್ಕಿಂತ ಉತ್ತಮವಾಗಿ ಮಾಡಲು ನಿಮ್ಮಲ್ಲಿ ಸಾಧ್ಯ ಇದೆ ಎಂದು ಈ ಸಿನಿಮಾ ಯಾವಾಗಲೂ ನೆನಪಿಸುತ್ತದೆ. ಭಯಂಕರವಾದ ‘ಅಧೀರ’ನ ದರ್ಶನವನ್ನು ಮಾಡಿಸಿದ್ದು ನಿರ್ದೇಶಕ ಪ್ರಶಾಂತ್ ನೀಲ್. ನನ್ನ ಪಾತ್ರ ಹೇಗೆ ಮೂಡಿಬಂದಿದೆ ಎಂಬುದರ ಶ್ರೇಯ ಸಂಪೂರ್ಣ ಪ್ರಶಾಂತ್ ಅವರಿಗೆ ಸಲ್ಲುತ್ತದೆ. ನಾವೆಲ್ಲರೂ ಪರದೆಯ ಮೇಲೆ ತಂದದ್ದು ಅವರ ಕನಸು, ”ಎಂದು ದತ್ ಹೇಳಿದ್ದಾರೆ.

ತನ್ನ ಅಭಿಮಾನಿಗಳು, ಹಿತೈಷಿಗಳು ಮತ್ತು ಕುಟುಂಬಕ್ಕೆ ಯಾವಾಗಲೂ ಅವರ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ ಎಂದು ದತ್ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next