Advertisement

ಕೆ.ಜಿ. ಹಳ್ಳಿ ಮಾದರಿಯಲ್ಲಿ ಚನ್ನಗಿರಿ ಘಟನೆ: ಪರಮೇಶ್ವರ

11:40 PM May 25, 2024 | Team Udayavani |

ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಬೆಂಗಳೂರಿನ ಡಿ.ಜೆ. ಹಳ್ಳಿ- ಕೆ.ಜೆ. ಹಳ್ಳಿ ಮಾದರಿಯಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು ಎಂಬ ಅಂಶ ತಿಳಿದು ಬಂದಿದೆ ಎಂದು ಗೃಹ ಸಚಿವ ಡಾ| ಪರಮೇಶ್ವರ ಶನಿವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ.

Advertisement

ಪೊಲೀಸ್‌ ಠಾಣೆಗೆ ಬಂದು ಧಮಕಿ ಹಾಕಿದ ವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಆದಿಲ್‌ ವಿರುದ್ಧ ದೂರು ಇದ್ದುದರಿಂದ ಪೊಲೀಸರು ಠಾಣೆಗೆ ಕರೆತಂದಿದ್ದರು. ಬಳಿಕ 7 ನಿಮಿಷ ಗಳಲ್ಲಿ ಏನಾಯಿತೋ ಗೊತ್ತಿಲ್ಲ. ಆರೋಗ್ಯದಲ್ಲಿ ವ್ಯತ್ಯಾಸ ಆಗಿ ಆತ ತೀರಿಕೊಂಡಿದ್ದಾನೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಆದರೆ ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಕೆಲವರು ಪ್ರತಿಭಟಿಸಿ, ಠಾಣೆಯಲ್ಲಿ ದಾಂಧಲೆ ನಡೆಸಿ ದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದಿಲ್‌ನ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಗೃಹ ಸಚಿವರು ಹೇಳಿದರು.

ಪ್ರತಿಭಟನಕಾರರು ಪೊಲೀಸ್‌ ಠಾಣೆಗೆ ನುಗ್ಗಲು ಯತ್ನಿಸಿದಾಗ ಲಘು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಪೊಲೀಸರಿಗೂ ಗಾಯವಾಗಿದೆ ಎಂದರು.

ಗುಂಪು ಘರ್ಷಣೆ ಹೇಳಿಕೇಳಿ ಆಗಲ್ಲ
ಉಡುಪಿ ಗ್ಯಾಂಗ್‌ವಾರ್‌ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ, ಇಂಥ ಗುಂಪು ಘರ್ಷಣೆಗಳು, ರೌಡಿ ಚಟುವಟಿಕೆಗಳು ಯಾರನ್ನೂ ಹೇಳಿಕೇಳಿ ನಡೆಯುವುದಿಲ್ಲ. ಅವುಗಳನ್ನು ಹತ್ತಿಕ್ಕಲು ಏನು ಬೇಕೋ ಅದನ್ನು ಮಾಡಲಾಗುತ್ತದೆ. ಅಂತಹವರು ಮುಕ್ತವಾಗಿ ಓಡಾಡಿಕೊಂಡಿರಲು ಬಿಡುವುದಿಲ್ಲ ಎಂದರು. ಬೆಳಗಾವಿ ಕ್ರಿಕೆಟ್‌ ಪಂದ್ಯದ ವೇಳೆ ನಡೆದ ಗಲಭೆ ಸಂಬಂಧ ಪ್ರತಿಕ್ರಿಯಿಸಿ, ಗಲ್ಲಿಯಲ್ಲಿ ಸಣ್ಣದಾಗಿ ಗಲಾಟೆ ಆಗಿ ದೊಡ್ಡದಾಗುತ್ತದೆ. ಅದನ್ನು ನಿಯಂತ್ರಿಸುವುದು ನಮ್ಮ ಕೆಲಸ. ಅದಕ್ಕೂ ಮೊದಲೇ ಊಹಿಸಲಾಗುತ್ತದೆಯೇ ಎಂದು ಮರುಪ್ರಶ್ನೆ ಹಾಕಿದರು.

Advertisement

ಯುವಕನ ಸಾವು ಲಾಕಪ್‌ ಡೆತ್‌ ಅಲ್ಲ. ಆತನಿಗೆ ಮೂರ್ಛೆರೋಗ ಇದ್ದುದರಿಂದ ಮೃತಪಟ್ಟಿ ದ್ದಾನೆ. ಆದರೆ ಎಫ್ಐಆರ್‌ ಇಲ್ಲದೆ ಪೊಲೀಸರು ಠಾಣೆಗೆ ಕರೆತಂದದ್ದು ತಪ್ಪು. ಈ ತಪ್ಪಿಗೆ ಪೊಲೀಸ್‌ ಅಧಿ ಕಾರಿಗಳ ಅಮಾನತಿಗೆ ಆದೇಶ ಮಾಡಿದ್ದೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next