Advertisement

ಕೆಎಫ್‌ಡಿ ಕಾಯಿಲೆ ತಡೆಗೆ ವಿಶೇಷ ಸೌಲಭ್ಯ

06:49 PM Apr 20, 2020 | Suhan S |

ಸಿದ್ದಾಪುರ: ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ತಾಲೂಕು ಅಧಿಕಾರಿಗಳು ಹಾಗೂ ಕೆಎಫ್‌ಡಿ ಪೀಡಿತ ಪ್ರದೇಶದ ನಾಗರಿಕರೊಂದಿಗೆ ಮುಂಜಾಗೃತಾ ಕ್ರಮಗಳ ಕುರಿತ ಸಭೆ ನಡೆಸಿ ಸರ್ಕಾರದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ತಾಲೂಕಿಗೆ ವಿಶೇಷವಾಗಿ ವೆಂಟಿಲೇಟರ್‌ ಇರುವ ಆ್ಯಂಬುಲೆನ್ಸ್‌ ಮಂಜೂರಾಗಿದೆ.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಯುಷ್ಮಾನ್‌ ಭಾರತ ಮತ್ತು ಆರೋಗ್ಯ ಕರ್ನಾಟಕ ಚಿಕಿತ್ಸಾ ಪ್ಯಾಕೇಜ್‌ನಲ್ಲಿ ಮಂಗನ ಕಾಯಿಲೆ ಚಿಕೆತ್ಸೆ ಸೇರಿಸಲಾಗಿದ್ದು, ಮಂಗನ ಕಾಯಿಲೆ ಸೋಂಕಿತರು, ಸೂಚಿಸಿದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಈ ಸೌಲಭ್ಯ ಪಡೆಯಬಹುದಾಗಿದೆ. ತಾಲೂಕಿನ ಮಂಗನಕಾಯಿಲೆ ಇರುವ ಪ್ರದೇಶಗಳಲ್ಲಿನ ಜಾನುವಾರುಗಳಿಗೆ ಉಣುಗಿನ ಲಸಿಕೆ ನೀಡುವ ಬಗ್ಗೆ ಔಷಧ ಖರೀದಿಸಲು 87,000 ರೂ.ಅನುದಾನ ಮತ್ತು ಕಾಯಿಲೆ ಪೀಡಿತ ಪ್ರದೇಶದ ಜಾನುವಾರುಗಳಿಗೆ ಉಣುಗು ಲಸಿಕೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next