Advertisement

ಮುಂಬೈ ದಾಳಿಯ ಉಗ್ರರು ಆರಾಮಾಗಿದ್ದಾರೆ: ಜೈಶಂಕರ್‌ ಆಕ್ರೋಶ

08:59 PM Oct 28, 2022 | Team Udayavani |

ಮುಂಬೈ: 2008, ನ.26ರಂದು ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದ ಪಾಕ್‌ ಉಗ್ರರ ದಾಳಿಯ ಮುಖ್ಯ ಪಿತೂರಿದಾರರು ಈಗಲೂ ಸುರಕ್ಷಿತವಾಗಿದ್ದಾರೆ, ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹರಿಹಾಯ್ದಿದ್ದಾರೆ.

Advertisement

ಈ ಮೂಲಕ ಉಗ್ರರಿಗೆ ರಕ್ಷಣೆ ನೀಡುತ್ತಿರುವ ಪಾಕಿಸ್ತಾನವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಹೊಸ ತಂತ್ರಜ್ಞಾನಗಳನ್ನು ಉಗ್ರಕೃತ್ಯಗಳಿಗೆ ಬಳಸಿಕೊಳ್ಳುವುದನ್ನು ತಡೆಯುವುದರ ವಿರುದ್ಧ ನಡೆದ ವಿಶೇಷಸಭೆಯಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕೆಲವು ಉಗ್ರಕೃತ್ಯಗಳಲ್ಲಿ ಸಿಕ್ಕಿಬಿದ್ದ ಉಗ್ರರನ್ನು ಬಹಿಷ್ಕರಿಸಲು ವಿಫ‌ಲವಾಗಿದೆ.

ರಾಜಕೀಯ ಹಿತಾಸಕ್ತಿಗಳ ಹಿನ್ನೆಲೆಯಲ್ಲಿ ಹೀಗೆ ನಡೆದಿದೆ, ಇದು ವಿಷಾದಕರ ಎಂದು ಜೈಶಂಕರ್‌ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಅಧ್ಯಕ್ಷ ಮೈಕೇಲ್‌ ಮೌಸ್ಸಾ ಉಪಸ್ಥಿತಿಯಲ್ಲಿ ಜೈಶಂಕರ್‌ ಮೇಲಿನ ಮಾತುಗಳನ್ನು ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next