Advertisement

ಶಾಂತಕ್ಕನ ಕೆಸು ಪುರಾಣ ಅವಲೋಕನ

04:21 PM Apr 12, 2021 | Team Udayavani |

ಹೊನ್ನಾವರ: ಕಸಕೊಟ್ಟರೂ ರಸ ಹುಡುಕುವ ಬುದ್ಧಿಯ ಜಾನಪದ ವಿದ್ವಾಂಸೆ ಶಾಂತಿ ನಾಯಕ ಈ ಬಾರಿ ಕೆಸು ಪುರಾಣ ಮತ್ತು ವಾಸ್ತವ ಎಂಬ 80 ಪುಟಗಳ ಪುಸ್ತಕವನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ. ಅವನೀ ಪ್ರಕಾಶನ ಇದನ್ನು ಪ್ರಕಟಿಸಿದೆ.

Advertisement

ಮಾನ ಮುಚ್ಚಿಕೊಳ್ಳಲು, ತಿನ್ನಲು, ಮನೆ ಕಟ್ಟಿಕೊಳ್ಳಲುಸೊಪ್ಪನ್ನು ಬಳಸುವ ಪರಂಪರೆ ಹಿಂದಿನಿಂದ ಇದೆ. ಮಲೆನಾಡಿಗರುಕಾಡಿನಲ್ಲಿ ಸಹಜವಾಗಿ ಸಿಗುವಸೊಪ್ಪುಗಳನ್ನು ಬಳಸಿ ಅಡುಗೆಮಾಡಿ ಊಟ ಮಾಡುತ್ತ ತಮ್ಮ ಆರೋಗ್ಯಕಾಪಾಡಿಕೊಂಡು ಬಂದಿದ್ದಾರೆ. ಖನಿಜಾಂಶಗಳಗಣಿಯಾಗಿರುವ ಕೆಸುವಿನ ಅಡುಗೆಯ ವಾಸ್ತವಪ್ರಪಂಚ ಅದ್ಭುತವಾದದ್ದು. ಎಲ್ಲ ಕೆಸುಗಳುಆಹಾರಕ್ಕೆ ಯೋಗ್ಯವಲ್ಲ. ಕೆಲವು ಪ್ರತಿಕೂಲ ಪರಿಣಾಮ ಬೀರುತ್ತವೆ.

ಹವಾಯಿಯನ್ನರು, ರೋಮನ್ನರು ಸಹಪ್ರಾಚೀನ ಕಾಲದಲ್ಲಿ ಕೆಸುವಿನ ಅಡುಗೆಬಲ್ಲವರಾಗಿದ್ದರು. ಕರಾವಳಿಯ ಕರಗಲಿ, ಪತ್ರೊಡೆ,ಸಹಿತ ವಿವಿಧ ಕೆಸುವಿನ ಆಹಾರ ತಯಾರಿಕೆ ಕುರಿತುವಿವರವಾಗಿ ಬರೆದಿರುವ ಶಾಂತಕ್ಕ ಕಾಡೆRಸು,ಬೀಳ್ಗೆಸು, ಮರಗೆಸು, ಕಲ್ಲುಕೆಸುಗಳ ಸಹಿತ 9 ವಿಧದಕೆಸುಗಳನ್ನು ಬರೆದಿದ್ದು, ಜಗತ್ತಿನಲ್ಲಿ 87ಬಗೆಯ ಕೆಸುಗಳಿವೆ ಅನ್ನುತ್ತಾರೆ. ಜೀವಸತ್ವಗಳ ಗಣಿಯಾದ ಕೆಸುವಿನ ಕರಗಲಿ ಕುರಿತು ಬರೆದಿದ್ದಾರೆ.

ರಾಸಾಯನಿಕಗಳಿಂದ ತೋಯ್ದ ಅಧಿಕ ಬೆಲೆಯತಾಜಾತನವಿಲ್ಲದ ಪೇಟೆಯ ತರಕಾರಿಗಿಂತ ಕೆಸುಹೇಗೆ ಮಿಗಿಲು, ಅದರಲ್ಲಿರುವ ಪೋಷಕಾಂಶಗಳುಎಷ್ಟು ಎಂಬುದನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ.ಕೆಸುವಿನ ಬಿಳಲುಗಳ ಅಡುಗೆ ಕುರಿತು ವಿವರಗಳಿವೆ.

ನೆಟ್ಟು ಬೆಳೆಸುವ ಕರಿಕೆಸುವಿನ ಧಾರ್ಮಿಕಮಹತ್ವವನ್ನು, ಅದರ ದಡಿಯ ಕಡುಬುಮತ್ತು ದೊಡ್ನ ತಯಾರಿಕೆ ಕುರಿತು ಬರೆದಿದ್ದಾರೆ.ಕೃಷ್ಣಾಷ್ಠಮಿ ದಿನ ಕರಿಕೆಸುವಿನ ಎಲೆಯು ಕೃಷ್ಣನಪೂಜೆಗೆ ಬಳಸುವುದನ್ನು ಬರೆದಿದ್ದಾರೆ. ಶ್ರಾದ್ಧದದಿನ ಕೆಸುವಿನ ಗಡ್ಡೆ ಹಸಿಮಾಡುವ ಪದ್ಧತಿ,ಭಟ್ಕಳದ ಗೊಂಡರ ಹಬ್ಬದಲ್ಲಿ ಕೆಸುವಿನ ಸ್ಥಾನ,ಬಾಣಂತಿ ಊಟಕ್ಕೆ ಕೆಸುವಿನ ಬಳಕೆ, ಮರಗೆಣಸಿನಎಲೆಯಲ್ಲಿ ಗೌರಿ, ಹೀಗೆ ತಮ್ಮ ಕೈಗೆ ಸಿಲುಕಿದ, ಕಣ್ಣಿಗೆಕಂಡ ಮಾತ್ರವಲ್ಲ ಅಂತರ್ಜಾಲದಲ್ಲಿ ತಡಕಾಡಿಕೆಸುವನ್ನು ಕಿತ್ತುಕೊಟ್ಟಿದ್ದಾರೆ. ಕೆಸುವಿನಲ್ಲಿರುವಪೌಷ್ಠಿಕಾಂಶಗಳು, ಆರೋಗ್ಯ ವರ್ಧಕ ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ.

Advertisement

ಎಂಎ, ಬಿಎಡ್‌ ಓದಿ ಕರ್ಕಿ ಪ್ರೌಢಶಾಲೆ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತ ಜಾನಪದ ಹಿರಿಯವಿದ್ವಾಂಸ ಡಾ| ಎನ್‌.ಆರ್‌. ನಾಯಕರಧರ್ಮಪತ್ನಿಯಾಗಿ ಅವರ ಎಲ್ಲ ಕೆಲಸಗಳಲ್ಲಿಜೊತೆಯಾಗಿ ದುಡಿದು ಸ್ವತಂತ್ರವಾಗಿ 25ಕ್ಕೂ ಹೆಚ್ಚುಜಾನಪದ ಅಡುಗೆಯ ಸಾಹಿತ್ಯ, ಮನೆಮದ್ದು,ಮೊದಲಾದ ಪುಸ್ತಕಗಳನ್ನು ಪ್ರಕಟಿಸಿರುವ ಶಾಂತಿನಾಯಕರಿಗೆ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆಪ್ರಶಸ್ತಿ, ಸಹಿತ ಹಲವು ಪ್ರಶಸ್ತಿಗಳು ದೊರಕಿವೆ. 78ರಈ ವಯಸ್ಸಿನಲ್ಲಿ ಕೆಸುವಿನ ಕುರಿತು ಬರೆದಿರುವ ಶಾಂತಕ್ಕನ ಕಸುವು ಮೆಚ್ಚತಕ್ಕದು.

ಹೊನ್ನಾವರದ ಭೂಮಿ ಜಾನಪದ ಪ್ರತಿಷ್ಠಾನವು ಶಾಂತಿ ನಾಯಕರು ಬರೆದು ಪ್ರಕಟಿಸಿರುವ,ಕೆಸು ಪುರಾಣ ಮತ್ತು ವಾಸ್ತವ ಪುಸ್ತಕದ ಕುರಿತು ಬರಹಗಳನ್ನು ಆಹ್ವಾನಿಸಿದೆ. ಪ್ರತಿ ಬರಹವು ಏ4ಆಕಾರದ 4-5 ಪುಟಗಳಿಗೆ ಮೀರದಂತಿರಬೇಕು.ಆಯ್ಕೆಗೊಂಡ ಐದು ಬರಹಗಳ ಲೇಖಕರನ್ನುಗೌರವ ಪ್ರಶಸ್ತಿ ಪತ್ರದೊಂದಿಗೆ ತಲಾ ಎರಡು ಸಾವಿರ ರೂ.ಗಳನ್ನು ನೀಡಿ ಗೌರವಿಸಲಿದೆ. ಬರಹಗಳನ್ನು ಮೇ 15 ರೊಳಗೆ ಸುಹಾಸ,ಉದಯಗಿರಿ ಪ್ರಭಾತನಗರ, ಹೊನ್ನಾವರ(ಉ.ಕ.)-581334 ಈ ವಿಳಾಸಕ್ಕೆ ಕಳಿಸಬೇಕು.ಪುಸ್ತಕವನ್ನು ರಿಯಾಯತಿ ದರದಲ್ಲಿ ಈಕೆಳಗಿನ ವಿಳಾಸದಲ್ಲಿ ಪಡೆಯಬಹುದು.ಚಂದ್ರಿಕಾ ಪಿ., ಅಭಿನವ, 2 ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40. ಮೊ. 9448804044.ಶಾಂತಿ ನಾಯಕ, ಸುಹಾಸ, ಉದಯಗಿರಿ,ಪ್ರಭಾತನಗರ. ಹೊನ್ನಾವರ ಮೊ. 9482438577.

 

ಜೀಯು, ಹೊನ್ನಾವರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next