Advertisement

Kerala Train ಕೇರಳ ರೈಲಿಗೆ ಬೆಂಕಿ: ಪ್ರಮುಖ ಆರೋಪಿ ಶಾರುಖ್ ಸೈಫಿ ಬಂಧನ

12:24 PM Apr 05, 2023 | Team Udayavani |

ರತ್ನಗಿರಿ : ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ಒಂದು ಶಿಶು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡ ಘಟನೆಯ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಲಾಗಿದೆ.

Advertisement

ಕೇಂದ್ರ ಗುಪ್ತಚರ ಮತ್ತು ಮಹಾರಾಷ್ಟ್ರ ಎಟಿಎಸ್ ಜಂಟಿ ತಂಡ ಸೈಫಿಯನ್ನು ಮಂಗಳವಾರ ರಾತ್ರಿ ರತ್ನಗಿರಿಯಲ್ಲಿ ಬಂಧಿಸಿದ್ದಾರೆ.

ಕೇರಳ ಪೊಲೀಸ್ ಡಿಜಿಪಿ ಅನಿಲ್ ಕಾಥ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನಿಖೆಗಾಗಿ ಎಸ್‌ಐಟಿ ರಚಿಸಲು ಆದೇಶ ನೀಡಿದ್ದರು. ಘಟನೆಯ ಬಳಿಕ ಶಾರುಖ್ ಸೈಫಿ ತಲೆ ಮರೆಸಿಕೊಂಡಿದ್ದ.

ರೈಲಿನಿಂದ ಇಳಿಯುವಾಗ ಬಿದ್ದು ಗಾಯಗೊಂಡಿರುವ ಶಾರುಖ್ ಸೈಫಿಗೆ ರತ್ನಗಿರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next