Advertisement

Kerala:ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಮುಖ್ಯ ಅರ್ಚಕರಾಗಿ ಅರುಣ್‌ ಕುಮಾರ್‌ ಆಯ್ಕೆ

04:16 PM Oct 17, 2024 | Team Udayavani |

ಕೇರಳ(Kerala): ಕೊಲ್ಲಂನ ಶಕ್ತಿಕುಲಂಗರದ ತೊಟ್ಟತ್ತಿಲ್ ಮಠದ ಎಸ್. ಅರುಣ್‌ ಕುಮಾರ್‌ (S Arun Kumar Namboothiri) ನಂಬೂದಿರಿ ಅವರನ್ನು ಶಬರಿಮಲೆ ಅಯ್ಯಪ್ಪಸ್ವಾಮಿ (Ayyappa Temple) ದೇವಸ್ಥಾನದ ಮುಖ್ಯ ಅರ್ಚಕರ(ಮೇಲ್‌ ಶಾಂತಿ)ನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

Advertisement

ಕೋಝಿಕೋಡ್‌ ನ ಒಲವನ್ನಾದಲ್ಲಿರುವ ತಿರುಮಂಗಳಾಥು ಇಳಂನ ವಾಸುದೇವನ್‌ ನಂಬೂದಿರಿ ಅವರನ್ನು ಶಬರಿಮಲೆಯಿಂದ ಕೇವಲ 100 ಮೀಟರ್‌ ಅಂತರದಲ್ಲಿರುವ ಮಲಿಕಪ್ಪುರಂ ದೇವಿ ದೇವಸ್ಥಾನದ ಮುಖ್ಯ ಅರ್ಚಕರನ್ನಾಗಿ ಆಯ್ಕೆ ಮಾಡಲಾಗಿದೆ.

ಶಬರಿಮಲೆಯ ವಾರ್ಷಿಕ ಮಕರವಿಳುಕ್ಕು ಮತ್ತು ಮಂಡಲ ಪೂಜೆ ಹಿನ್ನೆಲೆಯಲ್ಲಿ ಆ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮುಖ್ಯ ಅರ್ಚಕರಾಗಿ ಬುಧವಾರ (ಅ.16) ಅಧಿಕಾರ ಸ್ವೀಕರಿಸಿರುವುದಾಗಿ ವರದಿ ವಿವರಿಸಿದೆ.

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಉಷಾ ಪೂಜೆ ನೆರವೇರಿದ ನಂತರ ಸನ್ನಿಧಾನಂನಲ್ಲಿ ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಶಬರಿಮಲೆ ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆಯನ್ನು ಪಂದಳಂ ಅರಮನೆ ಪ್ರತಿನಿಧಿ ರಿಷಿಕೇಶ್‌ ವರ್ಮಾ ನಡೆಸಿಕೊಟ್ಟಿದ್ದರು.

Advertisement

ಮಲಿಕಪ್ಪುರಂನಲ್ಲಿ ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಪಂದಳಂ ಅರಮನೆಯ ಬಾಲ ಪ್ರತಿನಿಧಿ ವೈಷ್ಣವಿ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟಿದ್ದರು.

ಮುಖ್ಯ ಅರ್ಚಕರ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್‌, ಸದಸ್ಯರಾದ ಎ.ಅಜಿಕುಮಾರ್‌, ಜಿ.ಸುಂದರೇಶನ್‌, ದೇವಸ್ವಂ ಕಮಿಷನರ್‌ ಸಿ.ವಿ.ಪ್ರಕಾಶ್‌, ಸ್ಪೆಷಲ್‌ ಕಮಿಷನರ್‌ ಆರ್.ಜಯಕೃಷ್ಣನ್‌ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next