Advertisement

ಯುವಕನ ಜನನಾಂಗಕ್ಕೆ ಬೆಂಕಿಹಚ್ಚಿ ಕೊಂದರು…ಏನಿದು ಘಟನೆ? ಐವರ ಬಂಧನ

09:52 AM Dec 18, 2019 | Team Udayavani |

ತಿರುವನಂತಪುರಂ: ಏಳು ಮಂದಿಯ ಗುಂಪೊಂದು ಹರಿತವಾದ ಹಾಗೂ ಬಿಸಿ ಸಲಕರಣೆಯಿಂದ ವ್ಯಕ್ತಿಯೊಬ್ಬನ ಜನನಾಂಗವನ್ನೇ ಸುಟ್ಟು ಹಾಕಿದ್ದು, ಗಂಭೀರವಾಗಿ ಗಾಯಗೊಂಡ 30 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.

Advertisement

ಏನಿದು ಘಟನೆ:

30 ವರ್ಷದ ಯುವಕನೊಬ್ಬ ಮೊಬೈಲ್ ಹಾಗೂ ವಾಲ್ಲೆಟ್ ಕದ್ದ ಆರೋಪದ ಶಂಕೆಯ ಮೇಲೆ ಆತನನ್ನು ಹಿಡಿದು ಗುಂಪು ಚಿತ್ರಹಿಂಸೆ ನೀಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ತಿರುವಾಲ್ಲಂ ಪ್ರದೇಶದ ನಿವಾಸಿಯಾದ ಯುವಕನನ್ನು ಏಳು ಜನರ ಗುಂಪು ಥಳಿಸಿದ ನಂತರ ಆತನ ಶಿಶ್ನಕ್ಕೆ ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ. ತಿರುವನಂತಪುರಂನ ಮುಖ್ಯ ಬಸ್ ನಿಲ್ದಾಣದಲ್ಲಿ ಆಟೋ ಚಾಲಕ ಮಲಗಿದ್ದ ವೇಳೆ ಮೊಬೈಲ್ ಕದ್ದಿರುವುದಾಗಿ ಆರೋಪಿಸಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ, ಚಿತ್ರಹಿಂಸೆ ನೀಡಿದ್ದು, ಗಂಭೀರ ಗಾಯದಿಂದ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಜನನಾಂಗ ಶೇ.40ರಷ್ಟು ಸುಟ್ಟು ಹೋದ ಪರಿಣಾಮ ಆತ ಸಾವನ್ನಪ್ಪಿರುವುದಾಗಿ ಎಎನ್ ಐ ವರದಿ ಮಾಡಿದೆ. ದಾರಿಯಲ್ಲಿ ಹೋಗುತ್ತಿದ್ದವರು ಈ ಘಟನೆ ವೀಡಿಯೋ ಮಾಡಿದ್ದು, ಏಳು ಮಂದಿಯಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನಾಸೀರ್, ದಿನೇಶ್ ವರ್ಗೀಸ್, ಅರುಣ್, ಸಾಜನ್ ಹಾಗೂ ರಾಬಿನ್ ಸನ್ ಸೇರಿ ಐವರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next