Advertisement

ಬೆಕ್ಕಿಗೆ ಆಹಾರ ತರಲು ಕೇರಳ ಹೈಕೋರ್ಟ್‌ ಅನುಮತಿ

02:49 AM Apr 08, 2020 | Hari Prasad |

ಬೆಕ್ಕುಗಳಿಗೆ ಆಹಾರ ತರಲು ಪೊಲೀಸರು ಅನುಮತಿ ನಿರಾಕರಿಸಲ್ಪಟ್ಟಿದ್ದ ಅರ್ಜಿದಾರರಿಗೆ ಕೊನೆಗೂ ನ್ಯಾಯ ಸಿಕ್ಕಿದೆ.  ಪ್ರಾಣಿಗಳಿಗೆ ನೀಡುವ ಆಹಾರವೂ ಮೂಲ ಅಗತ್ಯ ಎಂದು ಪರಿಗಣಿಸಿರುವ ಎರ್ನಾಕುಳಂನಲ್ಲಿರುವ ಕೇರಳ ಹೈಕೋರ್ಟ್‌ ಪೊಲೀಸ್‌ ಇಲಾಖೆಗೆ ವಾಹನ ಪಾಸ್‌ ನೀಡುವಂತೆ ಆದೇಶ ಮಾಡಿದೆ.

Advertisement

ಮೂರು ಬೆಕ್ಕುಗಳನ್ನು ಹೊಂದಿರುವ ಎನ್‌. ಪ್ರಕಾಶ್‌ ಎಂಬುವರು ಪೊಲೀಸರು ಅನುಮತಿ ನೀಡದೇ ಇರುವುದನ್ನು ಪ್ರಶ್ನೆ ಮಾಡಿ ಹೈಕೊರ್ಟ್‌ನಲ್ಲಿ ದಾವೆ ಹೂಡಿದ್ದರು. ನ್ಯಾ.ಎ.ಕೆ.ಜಯಶಂಕರನ್‌ ನಂಬಿಯಾರ್‌ ಮತ್ತು ನ್ಯಾ.ಶಾಜಿ ಪಿ.ಚಲೆ ಅವರನ್ನೊಳಗೊಂಡ ನ್ಯಾಯಪೀಠ ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಿತು. ಪ್ರಾಣಿಗಳಿಗೆ ನೀಡುವ ಆಹಾರ ಕೂಡ ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next