Advertisement

ಉಪವಾಸ ಮಾಡಿದ ಕೇರಳದ ರಾಜ್ಯಪಾಲ!

07:44 AM Jul 15, 2021 | Team Udayavani |

ತಿರುವನಂತಪುರ: ವರದಕ್ಷಿಣೆ ಪಿಡುಗು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಬುಧವಾರ ತಿರುವನಂತಪುರದಲ್ಲಿ ಒಂದು ದಿನದ ಉಪವಾಸ ನಡೆಸಿದರು.

Advertisement

ಸಾಮಾಜಿಕ ಕಳಕಳಿ ಹೊಂದಿ, ಅದಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದಕ್ಷಿಣ ಭಾರತದ ರಾಜ್ಯವೊಂದರ ರಾಜ್ಯಪಾಲರೊಬ್ಬರು ಇದೇ ಮೊದಲ ಬಾರಿಗೆ ಉಪವಾಸ ನಡೆಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 6ರವರೆಗೆ ರಾಜ್ಯಪಾಲರು ಉಪವಾಸ ನಡೆಸಿದ್ದಾರೆ. ಬಳಿಕ ತಿರುವನಂತಪುರದ ಗಾಂಧಿ ಭವನದಲ್ಲಿ ಪ್ರಾರ್ಥನಾ ಸಭೆಯಲ್ಲೂ ಭಾಗವಹಿಸಿದರು.

ರಾಜ್ಯಪಾಲರ ಕ್ರಮಕ್ಕೆ ಬಿಜೆಪಿ ಮುಖಂಡ, ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್‌ ಬೆಂಬಲ ವ್ಯಕ್ತಪಡಿಸಿದ್ದಾರೆ. “ಕೇರಳದ ಬಾಲಕಿಯರು, ಮಹಿಳೆಯರ ಸುರಕ್ಷತೆಗೋಸ್ಕರ ರಾಜ್ಯಪಾಲರು ನಡೆಸುತ್ತಿರುವ ಉಪವಾಸಕ್ಕೆ ಬೆಂಬಲವಿದೆ’ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್‌ ಪ್ರತಿಕ್ರಿಯೆ ನೀಡಿ, ರಾಜ್ಯ ಸರಕಾರ ಮಹಿಳೆಯರನ್ನು ರಕ್ಷಿಸಲು ವಿಫ‌ಲವಾದ್ದರಿಂದಲೇ ರಾಜ್ಯಪಾಲರು ಉಪವಾಸ ನಡೆಸಬೇಕಾಯಿತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next