Advertisement

ಕೇರಳ ಸರಕಾರದ ಕಠಿನ ತೀರ್ಮಾನ ; ಕರ್ನಾಟಕದ ದಾರಿ ಬಂದ್‌!

08:05 AM Jul 07, 2020 | mahesh |

ಕಾಸರಗೋಡು: ಮಂಗಳೂರು, ಪುತ್ತೂರು ಮೊದಲಾದ ಕರ್ನಾಟಕದ ತಾಲೂಕುಗಳಿಗೆ ಪ್ರತಿನಿತ್ಯ ಉದ್ಯೋಗ ನಿಮಿತ್ತ ಹೋಗಿ ಬರುತ್ತಿದ್ದವರು ಇನ್ನು ಹಾಗೆ ಮಾಡುವಂತಿಲ್ಲ. ಒಮ್ಮೆ ಕರ್ನಾಟಕಕ್ಕೆ ಹೋದರೆ ಮುಂದಿನ 28 ದಿನ ಅಲ್ಲೇ ಇರಬೇಕು ಎಂಬ ನಿರ್ಣಯವನ್ನು ನಗರದಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಕೈಗೊಳ್ಳಲಾಗಿದೆ. ಕೋವಿಡ್‌ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಸಾಮಾಜಿಕ ಸಂಪರ್ಕದ ಮೂಲಕ ಸೋಂಕು ಹರಡುವುದನ್ನು ನಿಯಂತ್ರಿಸಲು ಕಠಿನ ಕ್ರಮಗಳನ್ನು ಕೈಗೊಳ್ಳಲು ಜನಪ್ರತಿನಿಧಿಗಳ ಸಭೆ ನಿರ್ಧರಿಸಿದೆ ಎಂದು ಕಂದಾಯ ಸಚಿವ ಇ. ಚಂದ್ರಶೇಖರನ್‌ ತಿಳಿಸಿದರು. ಜಿಲ್ಲೆಯ ಪ್ರಸ್ತುತ ಸ್ಥಿತಿಗತಿಗಳ ಕುರಿತು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ಶಿಲ್ಪಾ ಅವರು ಮಾಹಿತಿ ನೀಡಿದರು.

Advertisement

ಇತರ ರಾಜ್ಯಗಳಿಂದ, ವಿದೇಶಗಳಿಂದ ಊರಿಗೆ ಮರಳುವವರು ರಾಜ್ಯ ಸರಕಾರದ ಕೋವಿಡ್‌ – 19 ಜಾಗ್ರತಾ ಪೋರ್ಟಲ್‌ನಲ್ಲಿ ನೋಂದಣಿ ಮಾಡಿ ಜಿಲ್ಲೆಗೆ ಆಗಮಿಸಬೇಕು. ಅವರು ಬಂದ ಬಳಿಕ ನಿಯಮದಂತೆ ಕ್ವಾರಂಟೈನ್‌ನಲ್ಲಿರಬೇಕು. ಉಲ್ಲಂಘಿಸಿ ಕಳ್ಳದಾರಿಗಳಲ್ಲಿ ಬರಲು ಯತ್ನಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ.

ಎಲ್ಲರಿಗೂ ಅನ್ವಯ
ವೈದ್ಯರ ಸಹಿತ ಆರೋಗ್ಯ ಕಾರ್ಯಕರ್ತರಿಗೂ ಈ ಆದೇಶ ಅನ್ವಯವಾಗುತ್ತದೆ. ಅನಾವಶ್ಯಕ ಪ್ರಯಾಣವನ್ನು ತಡೆಯುವ ನಿಟ್ಟಿನಲ್ಲಿ ಗಡಿ ರಸ್ತೆಗಳಲ್ಲಿ ಬ್ಯಾರಿಕೇಡ್‌ಇರಿಸಿ ನಿರ್ಬಂಧ ಹೇರಲಾಗುವುದು. ತಲಾ ಮೂವರು ಸಿಬಂದಿ ಅಲ್ಲಿ ಕರ್ತವ್ಯದಲ್ಲಿರುತ್ತಾರೆ. ಪಂಚಾಯತ್‌, ಜಿಲ್ಲಾಡಳಿತ, ಪೊಲೀಸರು ತೀರ್ಮಾನಿಸುವ ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುಮತಿ ಇರುವುದು. ಗಡಿಗೆ ತಾಗಿರುವ ದ.ಕ. ಪ್ರದೇಶಗಳಿಗೆ ಅನಿವಾರ್ಯವಾಗಿ ತೆರಳಬೇಕಾಗಿರುವವರ ಆಧಾರ್‌ ಕಾರ್ಡ್‌ ಸಹಿತ ದಾಖಲೆ ಪತ್ರಗಳ ತಪಾಸಣೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next