Advertisement

3 ಬಾರಿ ಗಲ್ಫ್ ರಾಷ್ಟ್ರಕ್ಕೆ ಸ್ವಪ್ನಾ-ಶಿವಶಂಕರ್‌ ಭೇಟಿ

12:05 AM Aug 18, 2020 | mahesh |

ಕೊಚ್ಚಿ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಹೊಸ ಮಾಹಿತಿಯೊಂದು ಬಹಿರಂಗವಾಗಿದ್ದು, ಅಮಾನತಾಗಿರುವ ಐಎಎಸ್‌ ಅಧಿಕಾರಿ ಎಂ. ಶಿವಶಂಕರ್‌ ಅವರು ಆರೋಪಿ ಸ್ವಪ್ನಾ ಸುರೇಶ್‌ ಅವರ ಜತೆಗೆ 3 ಬಾರಿ ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

Advertisement

ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಮಾಜಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಶಿವಶಂಕರ್‌ ಅವರು 2017ರ ಏಪ್ರಿಲ್‌ನಲ್ಲಿ ಸ್ವಪ್ನಾರೊಂದಿಗೆ ಯುಎಇಗೆ ಭೇಟಿ ನೀಡಿದ್ದರು. ನಂತರ 2018ರ ಎಪ್ರಿಲ್‌ನಲ್ಲಿ ಸ್ವಪ್ನಾ ಅವರು ಒಮನ್‌ಗೆ ತೆರಳಿ, ಅಲ್ಲಿಗೆ ಮೊದಲೇ ತೆರಳಿದ್ದ ಶಿವಶಂಕರ್‌ರನ್ನು ಭೇಟಿಯಾಗಿದ್ದರು. ಬಳಿಕ ಇಬ್ಬರು ಒಟ್ಟಿಗೇ ಭಾರತಕ್ಕೆ ವಾಪಸಾಗಿದ್ದರು.

2018ರ ಅಕ್ಟೋಬರ್‌ನಲ್ಲಿ ಮತ್ತೂಮ್ಮೆ ಸ್ವಪ್ನಾ ಮತ್ತು ಶಿವಶಂಕರ್‌ ಯುಎಇಗೆ ಭೇಟಿ ನೀಡಿದ್ದರು ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಸೋಮವಾರ ವಿಶೇಷ ಕೋರ್ಟ್‌ಗೆ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next