Advertisement

ಪ್ರಧಾನಿ ಮೋದಿ ಮನೆಯಂಗಳದಲ್ಲಿ ಕೇರಳದ ಪುಟಾಣಿ ಉಡುಗೊರೆಯಾಗಿ ನೀಡಿದ ಪೇರಳೆ ಗಿಡ

07:44 PM Sep 03, 2021 | Team Udayavani |

ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ನಿವಾಸದಂಗಳದಲ್ಲಿ ಕೇರಳದ ಪುಟಾಣಿ ಉಡುಗೊರೆಯಾಗಿ ನೀಡಿದ ಪೇರಳೆ ಸಸಿ ನೆಲೆ ಕಂಡುಕೊಳ್ಳಲಿದೆ.

Advertisement

ಪತ್ತಣಮಿತ್ತ ಜಿಲ್ಲೆಯ ಕುಲನಾಡ ಹಳ್ಳಿಯ ಪುಟಾಣಿ ಜಯಲಕ್ಷ್ಮಿ ಈ ಅದೃಷ್ಟವಂತೆ. ತನ್ನ ಮನೆಯಂಗಳದಲ್ಲಿ ಸಾವಯವ ಕೃಷಿ ಕೈಗೊಂಡು ರಾಜ್ಯ ಸರ್ಕಾರದ ಪ್ರಶಸ್ತಿ ಪಡೆದಿರುವ ಈಕೆ, ಇತ್ತೀಚೆಗೆ ಒಂದು ಪೇರಳೆ ಸಸಿಯನ್ನು ಸಂಸದ ಸುರೇಶ್‌ ಗೋಪಿ ಅವರಿಗೆ ನೀಡಿದ್ದು, ಪ್ರಧಾನಿಯವರಿಗೆ ತಲುಪಿಸುವಂತೆ ಕೋರಿದ್ದಳು. ಸಂಸದ ಗೋಪಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದು, “ಪ್ರಧಾನಿ ತುಂಬು ಹೃದಯದಿಂದ ಸಸಿಯನ್ನು ಸ್ವೀಕರಿಸಿದ್ದಾರೆ. ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ಪೋಷಿಸುವುದಾಗಿ ತಿಳಿಸಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ :ಏರೋಸ್ಪೇಸ್ ಉತ್ಪನ್ನ ಉತ್ಪಾದನೆ ಶೇ.60 ಕ್ಕೆ ಏರಿಸುವ ಗುರಿ : ಸಿಎಂ ಬೊಮ್ಮಾಯಿ

Advertisement

Udayavani is now on Telegram. Click here to join our channel and stay updated with the latest news.

Next