Advertisement

ಕೇರಳ ಪ್ರವಾಹ; 20 ಸಾವಿರ ಕೋಟಿ ನಷ್ಟ, 27ಸಾವಿರ ಮನೆ, 134 ಸೇತುವೆ ನಾಶ

05:19 PM Aug 20, 2018 | Sharanya Alva |

ತಿರುವನಂತಪುರಂ: ಶತಮಾನದ ಮಹಾಮಳೆಯಿಂದ ಸಂಭವಿಸಿದ ಪ್ರವಾಹದಿಂದ ದೇವರ ನಾಡು ಕೇರಳದಲ್ಲಿ ಬರೋಬ್ಬರಿ 15ರಿಂದ 20 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ವಾಣಿಜ್ಯೋದ್ಯಮಿಗಳ ಮಹಾಸಂಘ ಅಸೋಚಾಮ್ ತಿಳಿಸಿದೆ.

Advertisement

ಆಗಸ್ಟ್ 8ರಿಂದ 15ರವರೆಗೆ ಕೇರಳ ರಾಜ್ಯ ಧಾರಾಕಾರ ಮಳೆಗೆ ತತ್ತರಿಸಿ ಹೋಗಿತ್ತು. ರಾಜ್ಯದ ಸುಮಾರು 37 ಡ್ಯಾಂಗಳ ಗೇಟ್ ಗಳನ್ನು ತೆರೆಯಲಾಗಿತ್ತು. ಮಳೆ, ಪ್ರವಾಹದಿಂದ ಕೇರಳದಲ್ಲಿ 361 ಮಂದಿ ಸಾವನ್ನಪ್ಪಿದ್ದರು. ಸುಮಾರು 10 ಲಕ್ಷ ಮಂದಿ ನಿರಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅಸೋಚಾಮ್ ವರದಿ ಪ್ರಕಾರ, ಶತಮಾನ ಕಂಡು ಕೇಳರಿಯದ ಪ್ರವಾಹಕ್ಕೆ ಕೇರಳ ಅಪಾರ ಪ್ರಮಾಣದ ಹಾನಿಗೊಳಗಾಗಿದೆ. ಇದನ್ನು ಸರಿಪಡಿಸಲು ಕೆಲವು ತಿಂಗಳುಗಳ ಅಗತ್ಯವಿದೆ. ಅದರಲ್ಲೂ ಪ್ರವಾಸೋದ್ಯಮ, ಬೆಳೆಗಳು, ಬಂದರು ಪ್ರದೇಶದ ವ್ಯಾಪಾ ವಹಿವಾಟು ಲಕ್ಷಾಂತರ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ.

ಕೇರಳ ಪ್ರಮುಖವಾಗಿ ಪ್ರವಾಸೋದ್ಯಮ, ಭತ್ತ, ಕಾಳುಮೆಣಸು, ಏಲಕ್ಕಿ, ಟೀ, ಕಾಫಿ, ಕೊಬ್ಬರಿ ಸೇರಿದಂತೆ ಕೃಷಿಯಿಂದ 8 ಲಕ್ಷ ಕೋಟಿ ತಲಾ ಆದಾಯವನ್ನು(ಜಿಎಸ್ ಟಿ-ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಹೊಂದಿದೆ. ಅಲ್ಲದೇ ವಾಣಿಜ್ಯ-ವಹಿವಾಟಿನ ಜೀವನಾಡಿಯಾದ ಕೊಚ್ಚಿ ಬಂದರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳು ಮಳೆಯಿಂದ ಅಪಾರ ನಷ್ಟ ಅನುಭವಿಸಿದೆ ಎಂದು ಅಸೋಚಾಮ್ ಹೇಳಿದೆ.

27 ಸಾವಿರ ಮನೆ ನಾಶ;

Advertisement

ಮಳೆ ಮತ್ತು ಪ್ರವಾಹದಿಂದ ಕೇರಳದಲ್ಲಿ 27 ಸಾವಿರ ಮನೆಗಳು ನಾಶವಾಗಿದೆ. ಸುಮಾರು 45 ಸಾವಿರ ಎಕರೆಯಷ್ಟು ಕೃಷಿಭೂಮಿ ಜಲಾವೃತಗೊಂಡು ಹಾಳಾಗಿದೆ. 134 ಸೇತುವೆ ಹಾಗೂ ಪಿಡಬ್ಯುಡಿಯ 16 ಸಾವಿರ ಕಿಲೋ ಮೀಟರ್ ರಸ್ತೆ ಹಾಗೂ ಸ್ಥಳೀಯ 82 ಸಾವಿರ ಕಿಲೋ ಮೀಟರ್ ರಸ್ತೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ ಎಂದು ವಿವರಿಸಿದೆ.

ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಕಂಬ, ಬ್ರಾಡ್ ಬ್ಯಾಂಡ್ ಕೇಬಲ್, ಸೇತುವೆಗಲ ಮರು ನಿರ್ಮಾಣಕ್ಕೆ ತುಂಬಾ ಸಮಯವೇ ತೆಗೆದುಕೊಳ್ಳಲಿದೆ. ಮನೆಗಳ ಪುನರ್ ನಿರ್ಮಾಣಕ್ಕೆ ತಿಂಗಳುಗಟ್ಟಲೇ ಬೇಕಾಗಲಿದೆ ಎಂದು ವರದಿ ತಿಳಿಸಿದೆ.

ಪ್ರವಾಸೋದ್ಯಮ ಮತ್ತು ಕ್ಯಾಶ್ ಕ್ರಾಪ್ ಕೇರಳಿಗರ ಜೀವನಾಡಿ. ಇವೆರಡೂ ಸಂಪೂರ್ಣವಾಗಿ ನಾಶವಾಗಿ ಬಿಟ್ಟಿದೆ. ಇದು ದೀರ್ಘಕಾಲದ ನಷ್ಟವಾಗಿದ್ದು, ಲಕ್ಷಾಂತರ ಜನರ ಬದುಕಿಗೆ ಹೊಡೆತ ನೀಡಿದೆ ಎಂದು ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next