Advertisement

ಸಂಶೋಧನೆಯಲ್ಲಿ ಹಸ್ತಕ್ಷೇಪ: ರಾಜೀನಾಮೆ

01:33 AM Mar 25, 2019 | Team Udayavani |

ಹೊಸದಿಲ್ಲಿ: ಪಿಎಚ್‌ಡಿ ಮತ್ತಿತರ ಸಂಶೋಧನೆಗಳಲ್ಲಿ ತೊಡಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಆದ್ಯತೆಗೆ ಸಂಬಂಧಪಟ್ಟ ವಿಚಾರಗಳನ್ನೇ ತಮ್ಮ ಸಂಶೋಧನಾ ವಿಷಯವನ್ನಾಗಿಸಿ ಕೊಳ್ಳಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ವಿರೋಧಿಸಿ ಕೇರಳ ಶಿಕ್ಷಣ ತಜ್ಞೆ ಡಾ| ಮೀನಾ ಟಿ. ಪಿಳ್ಳೆ ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೇಂದ್ರದ ಸುತ್ತೋಲೆಯನ್ನು ಕೇರಳ ವಿಶ್ವವಿದ್ಯಾಲಯ ಅಳವಡಿಸಿಕೊಂಡಿರುವುದನ್ನು ಪ್ರತಿಭಟಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

Advertisement

ಸುತ್ತೋಲೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳು ರಾಷ್ಟ್ರೀಯ ಆದ್ಯತೆಯ ವಿಚಾರಗಳನ್ನು ಆಧರಿಸಿದ ವಿಷಯಗಳ ಮೇಲಷ್ಟೇ ಸಂಶೋಧನೆ ನಡೆಸಬೇಕು. ಅನಗತ್ಯ ವಿಷಯಗಳ ಸಂಶೋಧನೆಗೆ ಅವಕಾಶವಿಲ್ಲ ಹಾಗೂ ಸಂಶೋಧನಾ ವಿಷಯಗಳನ್ನು ಸಂಬಂಧಪಟ್ಟಂತೆ ಇಲಾಖಾ ತಜ್ಞರೇ ರೂಪಿಸಿದ ವಿಷಯಗಳ ಪಟ್ಟಿಯಿಂದ ಒಂದು ವಿಷಯವನ್ನು ಆರಿಸಿಕೊಳ್ಳಬೇಕೆಂದು ಹೇಳಲಾಗಿದೆ. ಈ ಮೂರೂ ಅಂಶಗಳು, ಉನ್ನತ ವ್ಯಾಸಂಗಕ್ಕೆ ಮಾರಕವಾಗಿದೆ ಎಂದು ಡಾ| ಮೀನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next