Advertisement

ಪಿಎಂ ಮೋದಿ ವಿರುದ್ಧ ಕೇರಳ ಸಿಎಂ ಕಿಡಿ

01:54 AM Apr 15, 2019 | Sriram |

“ಕೇರಳ ಸರಕಾರವು ಅಯ್ಯಪ್ಪ ಭಕ್ತರನ್ನು ಜೈಲಿಗಟ್ಟಿದೆ’ ಎಂದು ಕರ್ನಾಟಕದಲ್ಲಿ ಪ್ರಧಾನಿ ಮೋದಿ ಆಡಿರುವ ಮಾತುಗಳಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಕೆಂಡವಾಗಿದ್ದಾರೆ.

Advertisement

ಮೋದಿ ಹೇಳಿಕೆಗೆ ರವಿವಾರ ಪ್ರತಿಕ್ರಿಯೆ ನೀಡಿರುವ ವಿಜಯನ್‌, “ಪ್ರಧಾನಿ ಮೋದಿ ಸುಳ್ಳುಗಳನ್ನು ಹೇಳಿಕೊಂಡು ಜನರ ಹಾದಿ ತಪ್ಪಿಸುತ್ತಿದ್ದಾರೆ. ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಶಬರಿಮಲೆ ವಿವಾದ ಕುರಿತು ಗಲಭೆ ನಡೆದಾಗ ರಾಜ್ಯದಲ್ಲಿ ನಿಷೇಧಾಜ್ಞೆ ಹೇರುವಂತೆ ಸೂಚನೆ ಕೊಟ್ಟಿದ್ದೇ ಕೇಂದ್ರ ಸರಕಾರ.

ಅಲ್ಲದೆ, ಪ್ರತಿಭಟನಾಕಾರರನ್ನು ಚದುರಿಸಲು ಕೇಂದ್ರದ ಪಡೆಗಳನ್ನೂ ಕಳುಹಿಸಿದ್ದು ಇದೇ ಮೋದಿ ನೇತೃತ್ವದ ಸರಕಾರವಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next