Advertisement

ಕೇರಳ ಸಿಎಂ ಅಧಿಕೃತ ನಿವಾಸ ದುರಸ್ತಿಗೊಳಿಸುವ ನಿರ್ಧಾರಕ್ಕೆ ಭಾರೀ ಆಕ್ಷೇಪ

03:11 AM Jun 09, 2021 | Team Udayavani |

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಅಧಿಕೃತ ನಿವಾಸ, “ಕ್ಲಿಫ್ ಹೌಸ್‌’ ಅನ್ನು 1 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಗೊಳಿಸುವ ನಿರ್ಧಾರಕ್ಕೆ ಭಾರೀ ಆಕ್ಷೇಪ ವ್ಯಕ್ತವಾಗಿದೆ.

Advertisement

ಕೊರೊನಾ ಸಂಕಷ್ಟದ ನಡುವೆ ರಾಜ್ಯ ಸರಕಾರ ವಿತ್ತೀಯ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಯೋಜನೆ ಏಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾವಿಸಿದ ಶಾಸಕ ಪಿ.ಟಿ.ಥಾಮಸ್‌ “ಅನಗತ್ಯ ವೆಚ್ಚ ನಿಯಂತ್ರಿಸಬೇಕೆಂದು ಈಗಾಗಲೇ ಸೂಚಿಸಿರುವ ಸರಕಾರ ಸಿಎಂ ಅಧಿಕೃತ ನಿವಾಸ ದುರಸ್ತಿ ವೆಚ್ಚವನ್ನು ಹೇಗೆ ಸಮರ್ಥಿಸುತ್ತದೆ’ ಎಂದು ಪ್ರಶ್ನಿಸಿದ್ದಾರೆ. ವಿತ್ತ ಸಚಿವ ಕೆ.ಎನ್‌.ಬಾಲಗೋಪಾಲ್‌ ಆರೋಪ ತಿರಸ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next