Advertisement

ತಿರುವನಂತಪುರಂ:ಬಿಜೆಪಿ ಕಚೇರಿ ಮೇಲೆ ದಾಳಿ,ರಾಜ್ಯಾಧ್ಯಕ್ಷ ಟಾರ್ಗೆಟ್‌?

10:58 AM Jul 28, 2017 | Team Udayavani |

ತಿರುವನಂತಪುರಂ: ನಗರದ ಬಿಜೆಪಿ ಕಚೇರಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ದಾಳಿ ನಡೆದ ವೇಳೆ ರಾಜ್ಯಾಧ್ಯಕ್ಷ ಕುಮ್ಮನಮ್‌ ರಾಜಶೇಖರನ್‌ ಅವರು ಕಚೇರಿಯ  ಒಳಗಿದ್ದರು. 

Advertisement

ಸಿಪಿಐ(ಎಂ) ಕಾರ್ಯಕರ್ತರೇ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. 

ದಾಳಿ ನಡೆದ ವೇಳೆ ಡಿವೈಎಫ್ಐ ರಾಜ್ಯ ಸಮಿತಿ ಸದಸ್ಯ ಐಪಿ ಬಿನು ಮತ್ತು ಎಸ್‌ಎಫ್ಐ  ರಾಜ್ಯ ಕಾರ್ಯದರ್ಶಿ ಪ್ರಾಜಿನ್‌ ಅವರು ಸ್ಥಳದಲ್ಲಿರುವುದು  ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿದೆ ಎಂದು ಎಎನ್‌ಐ ವರದಿ ಮಾಡಿದೆ. 

ಸ್ಥಳಕ್ಕಾಮಿಸಿದ ಪೊಲೀಸರು ಪರಿಶೀಲನೆ ನಡೆಸಿ  ಪ್ರಕರಣ ದಾಖಲಿಸಿಕೊಂಡು  ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.  ಕಚೇರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. 

ದಾಳಿಯಲ್ಲಿ 6 ಕಾರುಗಳು ಜಖಂಗೊಂಡಿದ್ದು ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಯಾರೊಬ್ಬರೂ ಗಾಯಗೊಂಡಿಲ್ಲ. 

Advertisement
Advertisement

Udayavani is now on Telegram. Click here to join our channel and stay updated with the latest news.

Next