Advertisement

ಕಪ್ಪು ಮಾಸ್ಕ್ ಗಳಿಗೂ ಅವಕಾಶವಿಲ್ಲ; ಸಿಎಂ ಪಿಣರಾಯಿ ನಗೆಪಾಟಲಿಗೀಡಾಗಿದ್ದಾರೆ: ಕಾಂಗ್ರೆಸ್

04:01 PM Feb 20, 2023 | Team Udayavani |

ಕೋಝಿಕ್ಕೋಡ್: ”ಶವಸಂಸ್ಕಾರಕ್ಕೂ ಕಪ್ಪು ಮಾಸ್ಕ್ ಧರಿಸಲು ಅಥವಾ ಕಪ್ಪು ಬಾವುಟ ಬಳಸಲು ಬಿಡದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈಗ ರಾಜ್ಯದ ಜನತೆಯ ಮುಂದೆ ನಗೆಪಾಟಲಿಗೀಡಾಗಿದ್ದಾರೆ” ಎಂದು ಕೇರಳದ ಪ್ರತಿಪಕ್ಷ ಕಾಂಗ್ರೆಸ್ ಸೋಮವಾರ ಆರೋಪಿಸಿದೆ.

Advertisement

ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಮಾತನಾಡಿ, ”ಮುಖ್ಯಮಂತ್ರಿಗಳು ಪೊಲೀಸರ ಹಿಂದೆ ಅಡಗಿಕೊಳ್ಳುವ ಹೇಡಿಯಾಗಿದ್ದಾರೆ” ಎಂದು ಕಿಡಿ ಕಾರಿದ್ದಾರೆ.

ರಾಜ್ಯದಲ್ಲಿ ಇಂಧನ ಬೆಲೆಗಳ ಮೇಲೆ ಎರಡು ರೂಪಾಯಿ ಸೆಸ್ ವಿಧಿಸುವ ಬಜೆಟ್ ನಿರ್ಧಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇರಳದ ಎಡ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆಯನ್ನು ನಡೆಸುತ್ತಿದೆ.

ಭಾನುವಾರ ಮುಖ್ಯಮಂತ್ರಿಯವರ ಕೋಝಿಕ್ಕೋಡ್ ಕಾರ್ಯಕ್ರಮವೊಂದರಲ್ಲಿ ಕಪ್ಪು ಉಡುಪು ಮತ್ತು ಮಾಸ್ಕ್ ಗಳನ್ನು ನಿಷೇಧಿಸಲಾಗಿದೆ ಎಂಬ ಆರೋಪದ ವರದಿಗಳನ್ನು ಸತೀಶನ್ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next