Advertisement

Theft Case ಕೆಂಚನೂರು: ಮನೆಯಲ್ಲಿದ್ದ ಚಿನ್ನಾಭರಣ ಕಳವು

12:44 AM Jan 08, 2024 | Team Udayavani |

ಕುಂದಾಪುರ: ಬಾಕ್ಸ್‌ನಲ್ಲಿ ಹಾಕಿ ಮನೆಯ ಕಪಾಟಿನಲ್ಲಿಟ್ಟಿದ್ದ ಒಟ್ಟು 1.80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ಕರ್ಕುಂಜೆ ಗ್ರಾಮದ ಕೆಂಚನೂರು ನಿವಾಸಿ ಶರತ್‌ ಆಚಾರ್ಯ ಅವರು ದೂರು ನೀಡಿದ್ದಾರೆ.

Advertisement

ಒಟ್ಟು 1.60 ಲಕ್ಷ ರೂ. ಮೌಲ್ಯದ 32 ಗ್ರಾಂ ತೂಕದ ಚಿನ್ನದ ಸರ ಹಾಗೂ 20 ಸಾವಿರ ರೂ. ಮೌಲ್ಯದ ನಾಲ್ಕೂವರೆ ಪವನಿನ ಉಂಗುರವಿದ್ದ ಬಾಕ್ಸ್‌ ಅನ್ನು ಜ. 7ರಂದು ಕಾರ್ಯಕ್ರಮಕ್ಕೆಂದು ತೆರಳಲು ನೋಡಿದಾಗ ಕಳವು ಆಗಿರುವುದು ಗೊತ್ತಾಯಿತು.

ತನ್ನೊಂದಿಗೆ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸಹೋ ದ್ಯೋಗಿಯೂ ಜ. 5ರಿಂದ ಕೆಲಸಕ್ಕೆ ಬಾರದೇ ನಾಪತ್ತೆಯಾಗಿದ್ದು, ಫೋನ್‌ ಮಾಡಿದರೂ ಸ್ವಿಚ್‌ ಆಫ್‌ ಬರುತ್ತಿದೆ. ಇದರಿಂದ ಆತನ ಮೇಲೆ ಅನುಮಾನ ಇರುವುದಾಗಿ ಶರತ್‌ ಆಚಾರ್ಯ ಅವರು ದೂರು ನೀಡಿದ್ದಾರೆ.

ಅದರಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next