Advertisement

ಅಂಧರ ಕ್ರಿಕೆಟ್‌ ತಂಡಕ್ಕೆ ಪಾಲಿಕೆಯಿಂದ ಕೆಂಪೇಗೌಡ ಪ್ರಶಸ್ತಿ

11:39 AM Feb 15, 2017 | Team Udayavani |

ಬೆಂಗಳೂರು: ಅಂಧರ ಟಿ-20 ವಿಶ್ವಕಪ್‌ ಗೆದ್ದ ಭಾರತದ ತಂಡವನ್ನು ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮೇಯರ್‌ ಜಿ. ಪದ್ಮಾವತಿ ಅಭಿನಂದಿಸಿದರು. 
ನಂತರ ಮಾತನಾಡಿದ ಮೇಯರ್‌, “ಅಂತರರಾಷ್ಟ್ರೀಯ ಮಟ್ಟದಲ್ಲಿ ಎರಡು ಬಾರಿ ಭಾರತ ತಂಡ ವಿಶ್ವಕಪ್‌ ಗೆದ್ದಿರುವುದು ಹೆಮ್ಮೆಯ ವಿಷಯ.

Advertisement

ಅವರ ಪರಿಶ್ರಮಕ್ಕೆ ಪ್ರತಿಫ‌ಲವಾಗಿ 2017ನೇ ಸಾಲಿನಲ್ಲಿ ಕ್ರಿಕೆಟ್‌ ತಂಡಕ್ಕೆ ಮತ್ತು ಸಮರ್ಥನಾ ಟ್ರಸ್ಟ್‌ಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರಿವಿಸಲಾಗುವುದು,” ಎಂದು ಹೇಳಿದರು. ಅಲ್ಲದೆ, ಪಾಲಿಕೆಯಿಂದ ಎಲ್ಲ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸಲಾಗುವುದು.

ವಿಶ್ವಮಟ್ಟದಲ್ಲಿ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ದೃಷ್ಟಿಹೀನರಾದರೂ ತುಂಬಾ ಆಸಕ್ತಿಯಿಂದ ಅಭಿರುಚಿ ತೋರಿಸಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫ‌ಲವಾಗಿ ದೇಶಕ್ಕೆ ವಿಶ್ವಕಪ್‌ ಸಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next