Advertisement

Karnataka Election 2023; ಕೆಮ್ಮಣ್ಣು: ಪ್ರಸಾದ್‌ ರಾಜ್‌ ಮತಪ್ರಚಾರ

10:49 AM Apr 23, 2023 | Team Udayavani |

ಮಲ್ಪೆ: ಕಾಂಗ್ರೆಸ್‌ ಬ್ಲಾಕ್‌ ಮಟ್ಟದ ಕಾರ್ಯಕರ್ತರ ಸಭೆಯು ಕೆಮ್ಮಣ್ಣು ಗ್ರಾಮದಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಕಂಡಳಾ ರಘುರಾಮ್‌ ಶೆಟ್ಟಿ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

Advertisement

ಉಡುಪಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಮಾತನಾಡಿ, ಬ್ರಹ್ಮಾವರ ಬ್ಲಾಕ್‌ ನಮಗೆ ಅತೀ ಹೆಚ್ಚು ಮತಗಳು ಸಿಗುವಂತಹ ಪ್ರದೇಶವಾಗಿದೆ.

ಕಾರ್ಯಕರ್ತರು ಹೆಚ್ಚು ಮತಗಳು ಕಾಂಗ್ರೆಸ್‌ ಪಕ್ಷಕ್ಕೆ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಹೊಸ ಕಾರ್ಯಕರ್ತರಿಗೆ ಇನ್ನಷ್ಟು ಉತ್ಸಾಹ ಮೂಡಿಸಬೇಕಾಗಿದೆ. ಹಳೇ ಕಾಂಗ್ರೆಸ್‌ ಮತ್ತು ಹೊಸ ಕಾಂಗ್ರೆಸ್‌ ಜತೆಯಾಗಿ ಕೆಲಸ ಮಾಡಿದ್ದಲ್ಲಿ, ಈ ಬಾರಿ ಅತೀ ಹೆಚ್ಚು ಅಂತರದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದರು.

ನಾಯಕರಾದ ವೆರೋನಿಕಾ ಕರ್ನೆಲಿಯೋ, ಪ್ರಖ್ಯಾತ್‌ ಶೆಟ್ಟಿ, ಉಡುಪಿ ಬ್ಲಾಕ್‌ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌, ಬ್ರಹ್ಮಾವರ ಬ್ಲಾಕ್‌ ಅಧ್ಯಕ್ಷ ದಿನಕರ್‌ ಹೇರೂರು, ಕೆಮ್ಮಣ್ಣು ಗ್ರಾ. ಪಂ. ಅಧ್ಯಕ್ಷೆ ಲತಾ, ಉಪಾಧ್ಯಕ್ಷ ಅರುಣ್‌ ಕುಮಾರ್‌, ತಾ. ಪಂ. ಮಾಜಿ ಸದಸ್ಯರಾದ ಸುಲೋಚನಾ, ರೆಹಮತುಲ್ಲಾ, ಕೀರ್ತಿ ಶೆಟ್ಟಿ ಉಪಸ್ಥಿತರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next