Advertisement

ಕಾಂಗ್ರೆಸ್‌ ಜತೆ ಮೈತ್ರಿಯೇ ಇಲ್ಲ: ಆಪ್‌ ಗೆ ಜೆಜೆಪಿ ನಿಷ್ಠುರ ಉತ್ತರ

11:33 AM Mar 13, 2019 | udayavani editorial |

ಹೊಸದಿಲ್ಲಿ : ಹರಿಯಾಣದಲ್ಲಿ ಬಿಜೆಪಿಯನ್ನು ಸೋಲಿಸಲು ತನ್ನ ಹಾಗೂ ತನ್ನ ಮಿತ್ರ ಪಕ್ಷವಾಗಿರುವ ಜನನಾಯಕ ಜನತಾ ಪಾರ್ಟಿ (ಜೆಜೆಪಿ)  ಮೈತ್ರಿಕೂಟವನ್ನು ಸೇರುವಂತೆ ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಮನವಿ ಮಾಡಿಕೊಂಡ ಬೆನ್ನಲ್ಲೇ ಅದನ್ನು ಸ್ವತಃ ಜೆಜೆಪಿಯೇ ಬಲವಾಗಿ ತಿರಸ್ಕರಿಸಿದೆ. 

Advertisement

ಕಾಂಗ್ರೆಸ್‌ ಜತೆಗೆ ತಾನೆಂದೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಜೆಜೆಪಿ ಅತ್ಯಂತ ನಿಷ್ಠುರವಾಗಿ ಸ್ಪಷ್ಟಪಡಿಸಿದೆ. 

ದಿವಂಗತ ಚೌಧರಿ ದೇವಿ ಲಾಲ್‌ ಅವರ ಸಿದ್ಧಾಂತಗಳನ್ನು ಆಧರಿಸಿ ಜೆಜೆಪಿ ಸ್ಥಾಪಿಸಲಾಗಿದೆ. ದೇವಿ ಲಾಲ್‌ ಅವರು ಕಾಂಗ್ರೆಸ್‌ ವಿರುದ್ಧ ಹೋರಾಡಿದವರು. ಹಾಗಾಗಿ ನಾವು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜೆಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ಬಾಂಗರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next