Advertisement

ಬೆಟ್ಟಿಂಗ್‌ ಆರೋಪಿಗಳ ಮಂಪರು ಪರೀಕ್ಷೆಯಾಗಲಿ: ಸಿ.ಟಿ.ರವಿ ಒತ್ತಾಯ

03:45 AM Feb 12, 2017 | Team Udayavani |

ಚಿಕ್ಕಮಗಳೂರು: ಬೆಟ್ಟಿಂಗ್‌ ಹಗರಣದಲ್ಲಿ ಬಂಧಿತರಾಗಿರುವವರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಮೂಲಕ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಬೇಕೆಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

Advertisement

ಬೆಟ್ಟಿಂಗ್‌ ಆರೋಪದಡಿ ಬಿಜೆಪಿಯ ನಗರಸಭಾ ಸದಸ್ಯ ಬಂಧನವಾಗಿರುವ ಹಿನ್ನೆಲೆಯಲ್ಲಿ ಬೆಟ್ಟಿಂಗ್‌ ದಂಧೆಗೆ ಸಿ.ಟಿ.ರವಿಯವರ ಬೆಂಬಲವಿದೆ ಎಂಬ ವದಂತಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ರವಿ, ತಮ್ಮ ಸಾರ್ವಜನಿಕ ಹಾಗೂ ರಾಜಕೀಯ ಜೀವನದಲ್ಲಿ ಮಟ್ಕಾ, ಬೆಟ್ಟಿಂಗ್‌, ಅಕ್ರಮ ಕ್ಲಬ್‌ಗಳನ್ನು ಮಾಡಿಕೊಂಡು ಬೆಟ್ಟಿಂಗ್‌ ಮಾಡುವ ದಂಧೆಗಳಿಗೆ ಎಂದೂ ಬೆಂಬಲಿಸಿಲ್ಲ, ಬೆಂಬಲಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ದಂಧೆಯಲ್ಲಿ ಬಿಜೆಪಿಯ ನಗರಸಭಾ ಸದಸ್ಯ ಸಿಕ್ಕಿ ಹಾಕಿಕೊಂಡಿರುವುದು ಖಚಿತ. ಇದನ್ನೇ ಬಳಸಿಕೊಂಡು ಕೆಲವು ಕೆಳಹಂತದ ಪೊಲೀಸ್‌ ಅಧಿಕಾರಿಗಳು ಈ ಪರಿಸ್ಥಿತಿಯ ದುರ್ಲಾಭ ಪಡೆದು ಪ್ರಕರಣದಲ್ಲಿ “ನಿಮ್ಮ ಹೆಸರಿದೆ’ ಎಂದು ಹೇಳುವ ಮೂಲಕ ಹಣ ಕೀಳುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ಈ ರೀತಿ ಪ್ರಕರಣಗಳು ಆದಾಗ ಯಾರನ್ನೋ ತೇಜೋವಧೆ ಮಾಡುವುದು ಸರಿಯಲ್ಲ. ನನ್ನ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ. ಬಂಧಿತರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಎಲ್ಲವೂ ಬಯಲಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next