Advertisement

ಸಿ.ಟಿ.ರವಿಗಾದ ಅನ್ಯಾಯ ಸರಿಪಡಿಸಲು ಯತ್ನಿಸುವೆ: ಯಡಿಯೂರಪ್ಪ ಭರವಸೆ

10:48 PM Apr 11, 2024 | Team Udayavani |

ಕಡೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಸಿ.ಟಿ.ರವಿಗೆ ಅನ್ಯಾಯವಾಗಿದೆ. ವಿಧಾನಸಭೆಯಲ್ಲಿ ಗುಡುಗಬೇಕಾದ ಅವರು ಹೊರಗಿದ್ದಾರೆ. ಮುಂಬರುವ ದಿನಗಳಲ್ಲಿ ಅವರಿಗೆ ವಿಧಾನ ಪರಿಷತ್ತು ಅಥವಾ ಎಲ್ಲಿಯಾದರೂ ಒಂದು ಅವಕಾಶ ಸಿಗಲೇಬೇಕೆಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಸಖರಾಯಪಟ್ಟಣದಲ್ಲಿ ಜರಗಿದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿ ರವಿ ಅವರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಮಾತನಾಡಿದ್ದ ರವಿ ಅವರು, ಸಾಕಷ್ಟು ಕೆಲಸ ಮಾಡಿದ್ದರೂ ಕಳೆದ ಚುನಾವಣೆಯಲ್ಲಿ ನನಗೆ ಓಟು ಹಾಕದಂತೆ ಅಪಪ್ರಚಾರ ನಡೆಸಲಾಯಿತು. ನನ್ನ ಗ್ರಹಚಾರ ಸರಿಯಿರಲಿಲ್ಲ. ಜೆಡಿಎಸ್‌ ಕೂಡ ಅವರನ್ನೇ ಬೆಂಬಲಿಸಿತು ಎಂದು ಪರೋಕ್ಷವಾಗಿ ಕುಟುಕಿದರು.

ಯಡಿಯೂರಪ್ಪನವರ ಹೋರಾಟ ಮತ್ತು ಹಿಂದುತ್ವದ ಪ್ರೇರಣೆಯಿಂದಲೇ ಬಿಜೆಪಿಗೆ ಬಂದ ನನ್ನ ಮತ್ತು ಅವರ ನಡುವೆ ಹುಳಿ ಹಿಂಡುವಂತಹ ಕಾರ್ಯವೂ ನಡೆಯಿತು. ಮೈಮರೆತು ಮತ ನೀಡಿದ ಪರಿಣಾಮವೋ, ಯಾರ ಕಾಲ್ಗುಣವೋ ಅಂತೂ ಈಗ ಕುಡಿಯಲೂ ನೀರಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next