Advertisement
ಪುಲ್ವಾಮಾ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ವಲಯ ಕಚೇರಿಗಳಿಗೆ ರೈಲ್ವೆ ಇಲಾಖೆಯು ಪತ್ರವೊಂದನ್ನು ಬರೆದಿದ್ದು, “ಯೋಧರ ಸಂಚಾರ, ಟ್ಯಾಂಕ್, ಗನ್ ಮತ್ತಿತರ ಸೇನಾ ಸಲಕರಣೆಗಳ ಸಾಗಾಟದ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಳ್ಳಬೇಕು. ಸೇನೆಯ ವಿಶೇಷ ರೈಲುಗಳ ಚಲನವಲನಗಳ ಮಾಹಿತಿ ಯನ್ನು ಯಾರಿಗೂ ನೀಡಬಾರದು. ಹಿರಿಯ ರೈಲ್ವೆ ಅಧಿಕಾರಿ, ರಕ್ಷಣಾ ಇಲಾಖೆ ಅಥವಾ ಗುಪ್ತಚರ ಅಧಿಕಾರಿ ಎಂದು ಹೇಳಿ ಯಾರಾದರೂ ಕರೆ ಮಾಡಿದರೂ, ಮಾಹಿತಿಯನ್ನು ನೀಡಬಾರದು’ ಎಂಬ ಖಡಕ್ ಸೂಚನೆಯನ್ನು ನೀಡಲಾಗಿದೆ.
Related Articles
Advertisement
ಸುಪ್ರೀಂ ಮೆಟ್ಟಿಲೇರಿದ ಯೋಧರ ಪುತ್ರಿಯರುಭದ್ರತಾ ಪಡೆಯ ಯೋಧರ ಮಾನವ ಹಕ್ಕುಗಳನ್ನು ರಕ್ಷಿಸಲು ಹೊಸ ನೀತಿಯೊಂದನ್ನು ಜಾರಿ ಮಾಡುವಂತೆ ಕೋರಿ ಸೇನಾಧಿಕಾರಿಗಳ ಇಬ್ಬರು ಪುತ್ರಿಯರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. 19 ವರ್ಷದ ಪ್ರೀತಿ ಕೇದಾರ್ ಗೋಖಲೆ ಮತ್ತು 20ರ ಹರೆಯದ ಕಾಜಲ್ ಮಿಶ್ರಾ ಅರ್ಜಿದಾರರು. ಸೇನಾ ಕರ್ತವ್ಯ ನಿರ್ವಹಿಸುವಾಗ ಪ್ರತಿಭಟನಾಕಾರರು ಅಥವಾ ಇತರರಿಂದ ಯೋಧರ ಮೇಲೆ ದಾಳಿಗಳು ನಡೆಯುತ್ತಿವೆ. ಇಂಥದ್ದನ್ನು ತಡೆಯುವ ನಿಟ್ಟಿನಲ್ಲಿ ಹೊಸ ನೀತಿ ಜಾರಿ ಮಾಡುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಸೋಮವಾರ ಈ ಅರ್ಜಿ ವಿಚಾರಣೆಗೆ ಬರಲಿದೆ. ಅರೆಸೇನಾಪಡೆಗಳ ಭತ್ಯೆ ಹೆಚ್ಚಳ
ಜಮ್ಮು-ಕಾಶ್ಮೀರದಲ್ಲಿ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿತರಾಗಿರುವ ಅರೆಸೇನಾ ಪಡೆಗಳ ಯೋಧರ ವಿಶೇಷ ಭತ್ಯೆಯನ್ನು ಹೆಚ್ಚಳ ಮಾಡಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ. ಉನ್ನತ ಅಧಿಕಾರಿಗಳ ಭತ್ಯೆಯನ್ನು ಮಾಸಿಕ 8,100ರೂ. ಮತ್ತು ಕೆಳಹಂತದ ಯೋಧರ ಭತ್ಯೆಯನ್ನು 7,600 ರೂ. ಏರಿಸಲಾಗಿದೆ. ಅಂದರೆ, ಇವರು ಇನ್ನು ಮುಂದೆ ಕ್ರಮವಾಗಿ ಮಾಸಿಕ 25 ಸಾವಿರ ರೂ. ಮತ್ತು 17,300 ರೂ. ಭತ್ಯೆ ಪಡೆಯಲಿದ್ದಾರೆ. ಪುಲ್ವಾಮಾ ದಾಳಿಯು ಅತಿದೊಡ್ಡ ಭದ್ರತಾ ವೈಫಲ್ಯ. ಜೈಶ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಮೌಲಾನಾ ಅಲ್ಲ, ಅವನೊಬ್ಬ ಶೈತಾನ.
– ಅಸಾದುದ್ದೀನ್ ಒವೈಸಿ, ಸಂಸದ