Advertisement

ಈ ಮಾನ್ಸೂನ್‌ಗೆ ನೀವೇ “ಮಿಂಚು’

06:00 AM Jul 11, 2018 | Team Udayavani |

ಮಳೆಯೆಂಬುದು ಸೌಂದರ್ಯದ ರಾಯಭಾರಿ. ಹಸಿರು, ಹೂವು, ಧೋ ಎನ್ನುವ ನಿಸರ್ಗ ಸಂಗೀತಗಳೆಲ್ಲ ಮಾನ್ಸೂನ್‌ನ ಮರೆಯಲಾಗದ ಕಚಗುಳಿ. ಈ ಆಹ್ಲಾದ ವಾತಾವರಣದಲ್ಲಿ ನಮ್ಮ ದೇಹದ ಚರ್ಮವೂ ಅತ್ಯಂತ ಮೃದುತ್ವ ಪಡೆಯುತ್ತದೆ. ಅದಕ್ಕೆ ಸೂಕ್ತ ಉಪಚಾರ ದೊರೆತರೆ, ಆಕರ್ಷಕ ಕಾಂತಿ ಪಡೆಯುತ್ತದೆ…

Advertisement

– ಮುಖವನ್ನು ಮಾಯಿಶ್ಚರೈಸರ್‌ಗೊಳಿಸಲು, ಮೊಗದ ತೇವಾಂಶವರ್ಧಕವಾಗಿ ಗುಲಾಬಿ ಜಲ ಮತ್ತು ಗ್ಲಿಸರಿನ್‌ ಲೇಪನ ಹಚ್ಚಿದರೆ ಉತ್ತಮ ಫ‌ಲಿತಾಂಶ ದೊರಕುತ್ತದೆ.

– ಸ್ವಲ್ಪ ನೀರಿನಲ್ಲಿ ಒಂದು ಚಮಚ ಕಡಲೆಹಿಟ್ಟು, ಒಂದು ಚಮಚ, ಹೆಸರು ಹಿಟ್ಟನ್ನು ಕರಗಿಸಬೇಕು. ಈ ಪೇಸ್ಟ್‌ಗೆ ಹಾಲು, ಜೇನು ಹಾಗೂ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಮುಖಕ್ಕೆ ಲೇಪಿಸಿ, ಮೃದುವಾಗಿ ತಿಕ್ಕಿ ತೊಳೆದರೆ, ಮೊಗದ ಚರ್ಮಕ್ಕೆ ಮೃದುತ್ವ, ಮಾರ್ದವತೆ ಸಿಗುತ್ತದೆ.

– ಮಳೆ ಎಷ್ಟೇ ಇದ್ದರೂ, ನಿತ್ಯವೂ 3 ಲೀಟರ್‌ನಷ್ಟು ಉಗುರು ಬೆಚ್ಚಗಿರುವ ನೀರಿನ ಸೇವನೆ ತಪ್ಪಿಸಬಾರದು.

– ಸ್ನಾನ ಮಾಡುವ ಮುನ್ನ, ಬಿಸಿ ನೀರಿಗೆ ಲಿಂಬೆರಸ ಮದ್ದು ಗುಲಾಬಿ ದಳವನ್ನು ಬೆರೆಸಿ, ಸ್ನಾನ ಮಾಡಿದರೆ ಚರ್ಮದ ತ್ವಚೆ ಹಿಗ್ಗುತ್ತದೆ.

Advertisement

– ತಾಜಾ ಗುಲಾಬಿ ದಳಗಳನ್ನು 15 ನಿಮಿಷ ಕುದಿಸಿ, ತಣಿಸಿದ ಹಾಲಿನಲ್ಲಿ ನೆನೆಸಿಡಬೇಕು. ತದನಂತರ ಅರೆದು ಪೇಸ್ಟ್‌ ತಯಾರಿಸಿ, ಮುಖಕ್ಕೆ ಲೇಪಿಸಬೇಕು. 20 ನಿಮಿಷದ ಬಳಿಕ ಮುಖ ತೊಳೆದರೆ ಶುಭ್ರ ಕಾಂತಿ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next