Advertisement

ಕವಿ ಕಯ್ಯಾರ 105ನೇ ಜನ್ಮ ದಿನಾಚರಣೆ

09:39 AM Jun 09, 2020 | sudhir |

ಬದಿಯಡ್ಕ: ನಾಡೋಜ ಡಾ| ಕಯ್ಯಾರ ಕಿಞ್ಞಣ್ಣ ರೈ ಅವರ 105ನೇ ಜನ್ಮ ದಿನಾಚರಣೆ ಸೋಮವಾರ ಕವಿ ಮನೆ “ಕವಿತಾ ಕುಟೀರ’ದಲ್ಲಿ ಕೋವಿಡ್‌ ನಿಬಂಧನೆಯಂತೆ ಸರಳವಾಗಿ ನೆರವೇರಿತು.

Advertisement

ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್‌. ಕೃಷ್ಣ ಭಟ್‌ ದೀಪ ಬೆಳಗಿಸಿ, ಕಯ್ನಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಉದ್ಘಾಟಿಸಿದರು. ಸರಳ ವ್ಯಕ್ತಿತ್ವದ ಕವಿಯ ಹೃದಯ ಶ್ರೀಮಂತಿಕೆ, ಬದುಕಿನ ಬದ್ಧತೆ, ಕ್ರಿಯಾತ್ಮಕ ಜೀವನ ಹೊಸ ತಲೆಮಾರಿಗೆ ಎಂದಿಗೂ ಆದರ್ಶನೀಯ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು ಮಾತನಾಡಿ, ಸಾಹಿತ್ಯ, ಕನ್ನಡ ಹೋರಾಟ, ರಾಜಕೀಯ, ಪತ್ರಿಕೋದ್ಯಮ, ಶಿಕ್ಷಣ ಕ್ಷೇತ್ರ, ಕೃಷಿ ಮೊದಲಾದ ಬಹುಮುಖದ ವ್ಯಕ್ತಿತ್ವದವರಾದ ಕಯ್ನಾರರು ಕಾಸರಗೋಡಿನ ಅಭಿಮಾನ ಎಂದರು.

ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ| ಎ. ಶ್ರೀನಾಥ್‌ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು. ಪುರುಷೋತ್ತಮ ಭಟ್‌ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next