ಕಾಪು: ಕಾಪು ಬೀಚ್ನಲ್ಲಿ ಶನಿವಾರ ಸಂಜೆ ನೀರಿನಲ್ಲಿ ಆಟವಾಡುತ್ತಿದ್ದ ವೇಳೆ ಸಮುದ್ರ ಪಾಲಾಗುತ್ತಿದ್ದ ಮೈಸೂರು – ಮಂಡ್ಯ ಮೂಲದ ಯುವಕರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ನೀರು ಪಾಲಾಗುತ್ತಿದ್ದ ಪರಶಿವ ಮೂರ್ತಿ, ರಾಹುಲ್, ತೇಜಸ್ ಮತ್ತು ಪವನ್ ಕುಮಾರ್ ಅವರು ನೀರಿನಲ್ಲಿ ಆಟವಾಡುತ್ತಿದ್ದಾಗಲೇ ಸಮುದ್ರದ ಅಲೆಗೆ ಸಿಲುಕಿ ಮುಳುಗೇಳಲಾರಂಭಿಸಿದ್ದರು.
ಯುವಕರು ಸಮುದ್ರದಲ್ಲಿ ಮುಳುಗೇಳುತ್ತಿರುವುದನ್ನು ಗಮನಿಸಿದ ಕಾಪು ಬೀಚ್ ನಿರ್ವಹಣ ತಂಡದ ಸದಸ್ಯರು ಮತ್ತು ಬೀಚ್ ರಕ್ಷಣಾ ತಂಡದ ಸದಸ್ಯರು ಎಚ್ಚರಿಕೆಯಾಗಿ ವಿಸಿಲ್ ಊದಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಧಾವಿಸಿದ ಬೀಚ್ ನಿರ್ವಹಣ ಉಸ್ತುವಾರಿ ಪ್ರಶಾಂತ್ ಕರ್ಕೇರ ಮತ್ತವರ ಸಂಗಡಿಗರಾದ ಪ್ರಥಮ್, ಸ್ಕೂಬಾ ಡೈವಿಂಗ್ ಪರಿಣತರಾದ ಜಾಕ್ಸನ್ ಮತ್ತು ಪ್ರದೀಪ್ ಕುಮಾರ್ ಸಮುದ್ರಕ್ಕೆ ಇಳಿದು ಯುವಕರನ್ನು ರಕ್ಷಿಸಿದ್ದರು.
ಇದನ್ನೂ ಓದಿ:ತನ್ನ ನಿಶ್ಚಿತಾರ್ಥ ದಿನದಂದು ಶಾಂಭವಿ ಹೊಳೆಗೆ ಬಿದ್ದವರನ್ನು ರಕ್ಷಿಸಿ ಸಾಹಸ ಮೆರೆದ ಶಮಂತ್ ಗೌಡ
ನೀರಿನಲ್ಲಿ ಮುಳುಗುತ್ತಿದ್ದ ರಾಹುಲ್ ಮತ್ತು ತೇಜಸ್ ಅವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮೇಲಕ್ಕೆ ತಂದು ಸ್ಥಳದಲ್ಲೆ ಪ್ರಥಮ ಚಿಕಿತ್ಸೆ ನೀಡಿ ಸಿಲಿಂಡರ್ ಮೂಲಕ ಆಕ್ಸಿಜನ್ ಒದಗಿಸಿ ಪ್ರಾಣ ಉಳಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದಾರೆ.