Advertisement

ಕಾಪು: ನಾಪತ್ತೆಯಾಗಿದ್ದ ವ್ಯಕ್ತಿ ಮೃತದೇಹ ಹೊಳೆಯಲ್ಲಿ ಪತ್ತೆ

12:28 AM Feb 19, 2023 | Team Udayavani |

ಕಾಪು: ಕಳೆದ ಡಿಸೆಂಬರ್‌ನಲ್ಲಿ ಪೇಟೆಗೆ ಹೋಗಿ ಬರುವುದಾಗಿ ಹೋಗಿದ್ದ ಮಲ್ಲಾರು ಗ್ರಾಮದ ಕೊಂಬಗುಡ್ಡೆ ನಿವಾಸಿ ಚಂದ್ರ (48) ಅವರ ಮೃತದೇಹ ಶನಿವಾರ ಮನೆ ಸಮೀಪದ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ಕಳೆದ ಡಿ. 21ರಂದು ಮಲ್ಲಾರು ಗ್ರಾಮದ ಸಂತೋಷ್‌ ಅವರ ಗದ್ದೆಯಲ್ಲಿ ಕೃಷಿ ಕೂಲಿ ಕೆಲಸಕ್ಕೆ ತೆರಳಿದ್ದ ಚಂದ್ರ ಅವರು ಸಂಜೆ ಮನೆಗೆ ಬಂದು ಸ್ನಾನ ಮಾಡಿ, ಬಳಿಕ ಕಾಪು ಪೇಟೆಗೆ ತೆರಳಿದ್ದು ಮನೆಗೆ ಮರಳದೇ ಅಲ್ಲಿಂದಲೇ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದು, ಕೇವಲ ತಲೆ ಬುರುಡೆಯೊಂದಿಗೆ ಪತ್ತೆಯಾಗಿದೆ. ಮೃತನ ಮೈಮೇಲೆ ಇದ್ದ ಬಟ್ಟೆಯನ್ನು ನೋಡಿ, ಮೃತದೇಹದ ಗುರುತು ಪತ್ತೆ ನಡೆಸಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಆಪದ್ಬಾಂಧವ ಸೂರಿ ಶೆಟ್ಟಿ ಮತ್ತು ನಾಗರಾಜ್‌ ಸಹಕಾರದೊಂದಿಗೆ ದೇಹವನ್ನು ಮೇಲಕ್ಕೆತ್ತಿ ಶವಾಗಾರಕ್ಕೆ ಸಾಗಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next