Advertisement

ಕಾಪು ಪಡು ಬೀಚ್‌ನಲ್ಲಿ ಶವ ಪತ್ತೆ

10:24 PM Sep 21, 2021 | Team Udayavani |

ಕಾಪು :  ಹೆಜಮಾಡಿಯಲ್ಲಿ ಸಮುದ್ರ ಪಾಲಾಗಿರುವ ಸಂತೋಷ್‌ ಪೂಜಾರಿ (40) ಎಂಬಾತನ ಮೃತದೇಹವು ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಸಮುದ್ರ ಕಿನಾರೆಯಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ.

Advertisement

ಸಮುದ್ರದಲ್ಲಿ ಅಪರಿಚಿತ ಶವವೊಂದು ತೇಲಿ ಬರುತ್ತಿರುವ ಬಗ್ಗೆ ಸ್ಥಳೀಯರಿಗೆ ದೊರಕಿದ ಮಾಹಿತಿಯ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಕಾಪು ಪುರಸಭೆಯ ವಾಹನ ಚಾಲಕ ನಿತೇಶ್‌ ಕುಮಾರ್‌ ಅವರು ಶವವನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಸೂರಿ ಶೆಟ್ಟಿ ಅವರ ನೇತೃತ್ವದಲ್ಲಿ ಶವವನ್ನು ಉಡುಪಿ ಶವಾಗಾರಕ್ಕೆ ಸಾಗಿಸಲಾಗಿದೆ.

ಬಳಿಕ ಕಾಪು ಬೀಚ್‌ನ ಲೈಫ್‌ಗಾರ್ಡ್‌ ಚಂದ್ರಶೇಖರ್‌ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಪು ಎಸ್ಸೈ  ರಾಘವೇಂದ್ರ ಸಿ., ಎಎಸ್ಸೈ ಗಳಾದ ರಾಜೇಂದ್ರ ಮಣಿಯಾಣಿ, ಗೋಪಾಲ ಶೆಟ್ಟಿಗಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿವಾಹಿತನಾಗಿರುವ ಸಂತೋಷ್‌ ಪೂಜಾರಿ ಹೆಜಮಾಡಿ ಪೇಟೆಯಲ್ಲಿ ಸೈಕಲ್‌ ಅಂಗಡಿ ನಡೆಸುತ್ತಿದ್ದು ಸಾವಿಗೆ ನಿಖರವಾದ ಕಾರಣಗಳು ತಿಳಿದು ಬಂದಿಲ್ಲ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 818 ಹೊಸ ಪ್ರಕರಣ | 1414 ಸೋಂಕಿತರು ಗುಣಮುಖ

Advertisement
Advertisement

Udayavani is now on Telegram. Click here to join our channel and stay updated with the latest news.

Next