Advertisement

ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸೋದು ತಪ್ಪಾ : ಸಚಿವರ ಪರ ಕಟ್ಟಾ ಸುಬ್ರಮಣ್ಯ ಬ್ಯಾಟಿಂಗ್

04:20 PM Mar 06, 2021 | Team Udayavani |

ಬೆಂಗಳೂರು :  ಆರು ಮಂದಿ ಸಚಿವರು ಕೋರ್ಟ್ ಗೆ ಅರ್ಜಿ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಟ್ಟಾ ಸುಬ್ರಮಣ್ಯ ನಾಯ್ಡು,   ಮಾಜಿ ಸಚಿವ ಮೇಟಿ ವಿಚಾರದಲ್ಲಿ ಏನಾಯ್ತು? ಸಿದ್ದರಾಮಯ್ಯ ಕಾಲದಲ್ಲಿ ಬಂದು ಹೋಯ್ತಲ್ಲ. ಅದೇ ರೀತಿ ಆರೋಪ ಬರುತ್ತೆ, ನಂತ್ರ ನಿರ್ದೋಷಿ ಅಂತ ಹೊರಬರ್ತಾರೆ, ರಮೇಶ್ ಜಾರಕಿಹೊಳಿ ಹೊರಬರ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

Advertisement

ಸುಳ್ಳು ಆರೋಪ ಬಂದಿರುವ ಹಿನ್ನೆಲೆಯಲ್ಲಿ ಆರು ಜನ ಸಚಿವರು ಕೋರ್ಟ್ ಗೆ ಹೋಗಿರಬಹುದು. ಯಾವ ಸಿಡಿ ಎಲ್ಲಿಟ್ಟಿದ್ದಾರೋ ಅಂತ ಅವರಿಗೆ ಭಯವಿದೆ. ನಕಲಿ ಯಾವ್ದು, ವರ್ಜಿನಲ್ ಯಾವ್ದು ಅಂತ ಅವರಿಗೆ ಡೌಟಿದೆ. ಯಾರೋ ನಿಮ್ಮ ಸಿಡಿ ಇದೆ ಎಂದು ಬ್ಲಾಕ್ ಮೇಲ್ ಮಾಡ್ತಿರಬಹುದು. ಅದಕ್ಕೆ ಮುಂಚೆಯೇ ರಕ್ಷಣೆಗೆ ಹೋಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸೋದು ತಪ್ಪಾ, ಅವರ ರಕ್ಷಣೆ ಅವರು ಮಾಡಿಕೊಳ್ಳಬೇಕಲ್ಲ, ಸಚಿವರ ಮೇಲೂ ನಕಲಿ ಸಿಡಿ ಇರಬಹುದು ಅವರು ರಕ್ಷಣೆ ಮಾಡಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ. ಆರು ಸಚಿವರ ಪರ ಕಟ್ಟಾ ಸುಬ್ರಮಣ್ಯ ನಾಯ್ಡು ಬ್ಯಾಟಿಂಗ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next